Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಇಂದು ಸ್ಪಂದನಾರವರ 11ನೇ ದಿನದ ಉತ್ತರ ಕ್ರಿಯೆ : ಕುಟುಂಬದ ಸದಸ್ಯರು ಸೇರಿದಂತೆ 400 ಗಣ್ಯರು ಭಾಗಿ

0

ಬೆಂಗಳೂರು: ನಟ ವಿಜಯ ರಾಘವೇಂದ್ರ ಕುಮಾರ್ ಅವರ ಪತ್ನಿ ಸ್ಪಂದನ ಅವರು ನಿಧನರಾಗಿ ಇಂದಿಗೆ 11 ದಿನವಾಗಿದ್ದು, ಇಂದು ಬೆಂಗಳೂರಿನ ಯಂಗ್ ಸ್ಟರ್ ಕಬ್ಬಡ್ಡಿ ಕ್ರೀಡಾಂಗಣದಲ್ಲಿ ಅವರ ಉತ್ತರಕ್ರಿಯೆ ನಡೆಯುತ್ತಿದೆ. ಆಗಸ್ಟ್ 6 ರಂದು ಬ್ಯಾಂಕಾಕ್ ನಲ್ಲಿ ಸ್ಪಂದನ ಹೃದಯಾಘಾತದಿಂದ ಮೃತಪಟ್ಟಿದ್ದರು. ನಂತರ ಅವರ ಮೃತ ದೇಹವನ್ನು ಶ್ರೀರಾಂಪುರದ ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇಂದು ಅವರ 11ನೇ ದಿನದ ಉತ್ತರಕ್ರಿಯೆ ನಡೆಯುತ್ತಿದೆ. ಈಗಾಗಲೇ ಬಿಬಿಎಂಪಿಯ ಯಂಗ್ ಸ್ಟಾರ್ ಕಬ್ಬಡ್ಡಿ ಕ್ರೀಡಾಂಗಣದಲ್ಲಿ ಸಕಲ ಸಿದ್ಧತೆಗಳು ಮಾಡಿಕೊಂಡಿದ್ದು, ಸದ್ಯದಲ್ಲೇ ಸ್ಪಂದನ ಅವರ ಉತ್ತರ ಕ್ರಿಯೆ ಹಾಗೂ ವಿವಿಧ ಕಾರ್ಯ ವಿಧಾನಗಳು ನಡೆಯಲಿವೆ. ಈ ಸಂಬಂಧ ಕುಟುಂಬದ ಸದಸ್ಯರು ಸಂಬಂಧಿಕರು ಸೇರಿದಂತೆ ಸುಮಾರು 300 ರಿಂದ 400 ಜನ ಗಣ್ಯರು ಭಾಗಿಯಾಗುವ ಸಾಧ್ಯತೆಗಳಿವೆ.

Leave A Reply

Your email address will not be published.