Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಉಡುಪಿ ರಹಸ್ಯ ವಿಡಿಯೋ ಪ್ರಕರಣದ ಬಗ್ಗೆ ನಾನು ಮಾತನಾಡೊದಿಲ್ಲ – ಮುಖ್ಯಮಂತ್ರಿ ಸಿದ್ದರಾಮಯ್ಯ

0

ಮಂಡ್ಯ ; ಉಡುಪಿ ರಹಸ್ಯ ವಿಡಿಯೋ ಪ್ರಕರಣದ ಬಗ್ಗೆ ನಾನು ಮಾತನಾಡೊದಿಲ್ಲ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಂಡ್ಯದ ಅಮರಾವತಿ ಹೋಟೆಲ್ ಬಳಿ ಮೈಸೂರು ಬೆಂಗಳೂರು ಎಕ್ಸಪ್ರಸ್ ಹೈವೇ ವೀಕ್ಷಣೆ ನಡೆಸಿದ ಸ್ಪೀಡ್ ಡಿಟೆಕ್ಟರ್‌ನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದರು. ಬಳಿಕ ಮಾಧ್ಯಮದವರೊಂದಿಗೆ‌ ಮಾತನಾಡಿದ ಸಿಎಂ, ಪ್ರಕರಣ ಸದ್ಯ ತನಿಖೆ ಹಂತದಲ್ಲಿದೆ. ಎಫ್‌ಐಆರ್‌ ಕೂಡಾ ಹಾಕಲಾಗಿದೆ. ಆದ್ದರಿಂದ ನಾನು ಆ ವಿಚಾರವಾಗಿ ಮಾತನಾಡೊದಿಲ್ಲ. ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ, ಬಿಜೆಪಿಯವರಿಗೆ ಆರೋಪ ಮಾಡೋದು ಬಿಟ್ಟರೆ ಬೇರೆ ಕೆಲಸವಿಲ್ಲ ಅಂತ ಸಿಎಂ ಹೇಳಿದರು.

Leave A Reply

Your email address will not be published.