Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಉಡುಪಿ: 60 ವರ್ಷ ಲೂಟಿ ಮಾಡಿದವರು ನಿನ್ನೆ ಒಟ್ಟು ಸೇರಿದ್ದಾರೆ – ಸಚಿವೆ ಶೋಭಾ ವ್ಯಂಗ್ಯ

0

ಉಡುಪಿ: ದೇಶವನ್ನು 60 ವರ್ಷಗಳ ಕಾಲ ಲೂಟಿ ಹೊಡೆದವರು ನಿನ್ನೆ ಒಂದು ಕಡೆ ಸೇರಿದ್ದರು. ಅವರು ತಮ್ಮ ಒಕ್ಕೂಟಕ್ಕೆ INDIA ಎಂದು ಹೆಸರು ಇಟ್ಟಿದ್ದಾರೆ. ಅವರದ್ದು ಇಂಡಿಯಾ ಅಲ್ಲ, ಲೂಟಿಕೋರ ಈಸ್ಟ್ ಇಂಡಿಯಾ ಕಂಪನಿ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಲೇವಡಿ ಮಾಡಿದ್ದಾರೆ. ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಚಿವರು, ನಿನ್ನೆ ಬೆಂಗಳೂರಿನಲ್ಲಿ ನಡೆದ 26 ಪಕ್ಷಗಳ ನಾಯಕರ ಸಭೆಯ ಬಗ್ಗೆ ತೀವ್ರ ಟೀಕಾಪ್ರಹಾರ ಮಾಡಿದರು. ಸಭೆಯಲ್ಲಿ ಸೇರಿದ ಎಲ್ಲರೂ ಕೂಡ ಪ್ರಧಾನ ಮಂತ್ರಿ ಅಭ್ಯರ್ಥಿಗಳಾಗಿದ್ದಾರೆ. ಈ ಹಿಂದೆ ಕೂಡ ಅವರು ಒಕ್ಕೂಟವನ್ನು ರಚಿಸಿ ವೈಫಲ್ಯ ಕಂಡಿದ್ದರು. ಈಗ ಹೊಸ ಹೆಸರಿನೊಂದಿಗೆ ಬಂದಿದ್ದಾರೆ. ಅವರಲ್ಲಿರುವ ಬಹುಪಾಲು ಜನರು ಲೂಟಿಕೋರರಾಗಿದ್ದಾರೆ.ಅವರು ಇಂಡಿಯ ಎಂಬ ಹೆಸರು ಇಟ್ಟದ್ದೇ ಕಾನೂನುಬಾಹಿರವಾಗಿದೆ ಎಂದು ಸಚಿವರು ಹೇಳಿದರು.

Leave A Reply

Your email address will not be published.