Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

‘ಕೇಂದ್ರದ ಬಿಜೆಪಿ ನಾಯಕರು ನಮಗಿಂತ ಬುದ್ದಿವಂತರು’ – ಈಶ್ವರಪ್ಪ

0

ಹಾವೇರಿ,: ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷ ಯಾರು, ವಿಪಕ್ಷ ನಾಯಕ ಯಾರು ಎಂದು ಪ್ರಶ್ನೆ ಕೇಳುತ್ತಿದ್ದಾರೆ. ಕೇಂದ್ರದ ನಾಯಕರು ನಮಗಿಂತ ಬುದ್ದಿವಂತರು. ಯಾವ ಕಾರಣ ನಿಲ್ಲಿಸಿದ್ದಾರೆ ಎನ್ನುವು‌ದನ್ನ ಆಲೋಚನೆ ಮಾಡಿರುತ್ತಾರೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷ ಯಾರು, ವಿಪಕ್ಷ ನಾಯಕ ಯಾರಾದರೂ ಆಗುತ್ತಾರೆ. ಲಕ್ಷಾಂತರ ಕಾರ್ಯಕರ್ತರಿದ್ದಾರೆ, ಸಂಘಟನೆಯ ಕೆಲಸ ನಿಂತಿಲ್ಲ. ಯಾವುದೇ ಸಂದರ್ಭದಲ್ಲಿ ಲೋಕಸಭಾ ಚುನಾವಣೆ ಬಂದರು 28 ಸೀಟ್ ಗೆಲ್ಲುತ್ತೇವೆ, ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿ ಮಾಡುತ್ತೇವೆ ಎಂದರು.

ಇನ್ನು ಸೂರ್ಯ ಚಂದ್ರ ಮತ್ತೆ ಮತ್ತೆ ಹುಟ್ಟಿಬಂದರೂ 17 ಜನರನ್ನು ಮತ್ತೆ ಕರೆದುಕೊಳ್ಳಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಕಾಂಗ್ರೆಸ್ ಗೆ ಎಂದು ಈಗ ಎಲ್ಲರ ಮನೆಗೆ ಹೋಗಿ ಕೈಕಾಲು ಹಿಡಿಯುತ್ತಿದ್ದಾರೆ. ಒಬ್ಬರಾದರೂ ಬಂದರಾ? ಎಂದು ಪ್ರಶ್ನಿಸಿದ್ದಾರೆ.

Leave A Reply

Your email address will not be published.