Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಚಾಕುವಿನಿಂದ ಇರಿದು ವಿದ್ಯಾರ್ಥಿನಿ ಕಿಡ್ನಾಪ್ ಮಾಡಿದ್ದ ಯುವಕನ ಬಂಧನ

0

ರಾಮನಗರ: ಪ್ರಥಮ ಪಿಯುಸಿ ವಿದ್ಯಾರ್ಥಿನಿಗೆ ಚಾಕು ಇರಿದ ಬಳಿಕ ಆಕೆಯನ್ನು ಕಿಡ್ನ್ಯಾಪ್‌ ಮಾಡಿದ ಪ್ರಕರಣದ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಹೆಡೆಮುರಿ ಕಟ್ಟುವಲ್ಲಿ ರಾಮನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಕನಕಪುರ ತಾಲೂಕಿನ ದಾಳಿಂಬ ಗ್ರಾಮದ ಚೇತನ್ ಬಂಧಿತ ಆರೋಪಿ. ಈತ ರಾಮನಗರದ ಸರ್ಕಾರಿ ಕಾಲೇಜು ಬಳಿಯಿಂದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸಂಜನಾ(16) ಚಾಕುವಿನಿಂದ ಇರಿದು ಮಾಡಿ ಅಪಹರಣ ಮಾಡಿದ್ದ.

ಸ್ಥಳೀಯ ನಿವಾಸಿಗಳು ಕಿಡ್ನ್ಯಾಪ್ ಮಾಡುತ್ತಿದ್ದವನ ಮೇಲೆ ಹಾಗೂ ಕಾರಿನ ಮೇಲೆ ಕಲ್ಲೆಸೆದಿದ್ದು, ಕಲ್ಲೇಟಿಗೂ ಹೆದರದೇ ಅಪ್ರಾಪ್ತೆ ಅಪಹರಿಸಿ​ ಇನ್ನೋವಾ ಕಾರಿನಲ್ಲಿ ಯುವಕ ಪರಾರಿಯಾಗಿದ್ದ.

ತಕ್ಷಣ ಕಾರ್ಯಾಚರಣೆಗೆ ಇಳಿದ ಪೊಲೀಸರು ಇನ್ನೋವಾ ಚೇಸ್ ಮಾಡಿ ಯುವಕನನ್ನು ಬಂಧಿಸಿದ್ದಾರೆ. ಸಂಜನಾಳನ್ನು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿ ಮತ್ತು ವಿದ್ಯಾರ್ಥಿನಿ ಒಂದೇ ಗ್ರಾಮದವರಾದವರಾಗಿದ್ದು, ವಿದ್ಯಾರ್ಥಿನಿ ತನ್ನ ಅಜ್ಜಿಮನೆಯಲ್ಲಿದ್ದು ಕಾಲೇಜಿಗೆ ಹೋಗುತ್ತಿದ್ದು ಬೆಳಗ್ಗೆ ಸಹಪಾಠಿಯೊಂದಿಗೆ ಕಾಲೇಜಿಗೆ ಬರುತ್ತಿರುವಾಗ ಇನ್ನೋವಾ ಕಾರಿನಲ್ಲಿ ಬಂದ ಆರೋಪಿ ಚೇತನ್ ಆಕೆಯ ಚುಚ್ಚಿ ಅಪಹರಣ ಮಾಡಿದ್ದ.

Leave A Reply

Your email address will not be published.