Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಚಿಕ್ಕಮಗಳೂರು: ಬಿ.ಕೆ.ಹರಿಪ್ರಸಾದ್ ನಮ್ಮ ರಾಜ್ಯದ ವಿಚಾರದಲ್ಲಿ ಹೇಳಿಲ್ಲ- ಸಚಿವ ಕೆ.ಜೆ.ಜಾರ್ಜ್

0

ಚಿಕ್ಕಮಗಳೂರು: “ಸಿಎಂ ಆಯ್ಕೆ ಮಾಡುವುದೂ ಗೊತ್ತಿದೆ, ಕೆಳಗಿಳಿಸುವುದೂ ಗೊತ್ತಿದೆ” ಎಂದು ಕಾಂಗ್ರೆಸ್‌ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಚಿಕ್ಕಮಗಳೂರಿನಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಪ್ರತಿಕ್ರಿಯೆ ನೀಡಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಖಾಂಡ್ಯದಲ್ಲಿ ಮಾತನಾಡಿದ ಅವರು, ಬಿ.ಕೆ.ಹರಿಪ್ರಸಾದ್ ರಾಜ್ಯದ ವಿಚಾರದಲ್ಲಿ ಹೇಳಿಲ್ಲ ಎಂಬುದು ನನ್ನ ನಂಬಿಕೆ. ಬಿ.ಕೆ.ಹರಿಪ್ರಸಾದ್ ಈ ಮಾತನ್ನು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂದು ಅವರನ್ನೇ ಕೇಳಬೇಕು. ಅವರು ಎಐಸಿಸಿ ಉಸ್ತುವಾರಿಯಾಗಿ ಹಲವು ರಾಜ್ಯಗಳಲ್ಲಿ ಕೆಲಸ ಮಾಡಿದ್ದಾರೆ. ಆಗ ಅವರು ಹಲವರನ್ನು ಸಿಎಂ ಮಾಡಿದ್ದಾರೆ, ಕೆಲವರನ್ನು ತೆಗೆದಿದ್ದಾರೆ. ಆ ಅರ್ಥದಲ್ಲಿ ಹೇಳಿದ್ದಾರೆ ಹೊರತು ಕರ್ನಾಟಕದ ರಾಜಕೀಯ ವಿಚಾರವಾಗಿ ಮಾತನಾಡಿಲ್ಲ ಎಂದರು. ಇನ್ನು ಬಿ.ಕೆ.ಹರಿಪ್ರಸಾದ್ ನಮ್ಮ ಪಕ್ಷದ ಹಿರಿಯ ನಾಯಕರು. ಅವರು ಕರ್ನಾಟಕ ರಾಜ್ಯದ ಸಿಎಂ ಬಗ್ಗೆ ಮಾತನಾಡಿಲ್ಲ. ರಾಜ್ಯದಲ್ಲಿ ಯಾವುದೇ ಗೊಂದಲ ಇಲ್ಲ. ಹರಿಪ್ರಸಾದ್ ಬಹಳ ದೊಡ್ಡ ಹುದ್ದೆಯಲ್ಲಿದ್ದರು. ಅವರು ನೇರವಾಗಿ ಹೈಕಮಾಂಡ್ ಜೊತೆ ಮಾತನಾಡುತ್ತಾರೆ ಎಂದರು.

Leave A Reply

Your email address will not be published.