Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

‘ಚೆಸ್‌ ಪಟು ಪ್ರಜ್ಞಾನಂದ್‌ಗೆ ಒತ್ತಡ ಹಾಕಬೇಡಿ’ – ಸುಧಾಮೂರ್ತಿ

0

ಬೆಂಗಳೂರು:ಭಾರತದ ಪಾಲಿಕೆ ಮತ್ತೊಂದು ಇತಿಹಾಸ ನಿರ್ಮಿಸಲು ಹೊರಟಿರುವ ಚೆಸ್‌ ಪಟು ಪ್ರಜ್ಞಾನಂದ ಮೇಲೆ ಗೆಲ್ಲುವುದಕ್ಕೆ ಯಾವುದೇ ಒತ್ತಡ ಹಾಕಬಾರದೆಂದು ಇನ್ಫೋಸಿಸ್‌ ಫೌಂಡೇಶನ್‌ನ ಸುಧಾಮೂರ್ತಿ ಸಲಹೆ ನೀಡಿದ್ದಾರೆ.

ಫಿಡೆ ವಿಶ್ವಕಪ್ ಚೆಸ್ ಫೈನಲ್‌ನಲ್ಲಿ ಭಾರತೀಯ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಗ್ನಾನಂದ ಅವರ ಯಶಸ್ಸಿಗಾಗಿ ಲಕ್ಷಾಂತರ ಜನರು ಪ್ರಾರ್ಥಿಸುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರು ಕೂಡ ಪ್ರಜ್ಞಾನಂದ್‌ಗೆ ಒತ್ತಡ ಹೇರಬಾರದು. ಅವನಿಗೆ ಮೆದುಳನ್ನು ಶಾಂತವಾಗಿ ಇಟ್ಟುಕೊಳ್ಳಲು ಅವಕಾಶ ಮಾಡಿಕೊಡಬೇಕು. ಇದು ಕ್ರೀಡೆ; ನಮಗೆ ಏನೇ ಸಿಕ್ಕರೂ ಅದನ್ನು ಸ್ವೀಕರಿಸಬೇಕು. ಗೆಲ್ಲುವುದು ಸೋಲುವುದು ದೇವರ ನಿರ್ಧಾರ. ಕ್ರೀಡೆಯನ್ನು ಒತ್ತಡದ ಆಟವಾಗಿ ಯಾವತ್ತೂ ಮಾಡಲು ಹೋಗಬಾರದು ಎಂದಿದ್ದಾರೆ.

“ನೀನು ಗೆಲ್ಲಲೇ ಬೇಕು ಎಂದು ಹೇಳುವ ಮೂಲಕ ಪ್ರಗ್ನಾನಂದನ ಮೇಲೆ ಮತ್ತಷ್ಟು ಒತ್ತಡ ಹೇರಲು ನಾನು ಬಯಸುವುದಿಲ್ಲ” ಎಂದು ಹೇಳಿದ್ದಾರೆ.

Leave A Reply

Your email address will not be published.