Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

[/vc_column][/vc_row]

‘ನನಗಿನ್ನೂ ವಯಸ್ಸಿದೆ ಜನಸೇವೆ ಮಾಡುತ್ತೇನೆ’ – ನಿಖಿಲ್ ಕುಮಾರಸ್ವಾಮಿ

0

ರಾಮನಗರ: ನನಗೆ ಇನ್ನೂ ಕೂಡ ವಯಸ್ಸಿದೆ, ಹೆಚ್‌.ಡಿ. ದೇವೇಗೌಡರು ಹೆಚ್‌.ಡಿ.ಕುಮಾರಸ್ವಾಮಿಯವರಂತೆ ಜನಸೇವೆ ಮಾಡುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ನಿಖಿಲ್, ಕುಮಾರಸ್ವಾಮಿ ಅವರು ನಿಮ್ಮ ನಂಬಿ ಸ್ಪರ್ಧೆ ಮಾಡಿದರು. ನೀವು ಕೈಹಿಡಿದ್ರಿ, ಪಕ್ಷ ಅಧಿಕಾರಕ್ಕೆ ತರಲು ಪಂಚರತ್ನ ಯಾತ್ರೆ ಮಾಡಿದರು. ಅವರ ಅನುಪಸ್ಥಿತಿಯಲ್ಲಿ ಇಲ್ಲಿನ ಜನ ಅವರನ್ನು ಗೆಲ್ಲಿಸಿದರು‌ ಎಂದರು.

ಇನ್ನು ಕುಮಾರಣ್ಣನ ಮೇಲಿನ ಜನ ಪ್ರೀತಿ ಕಂಡು ಬೆರಗಾದೆ. ರಾಮನಗರ ಜಿಲ್ಲೆಯಲ್ಲೇ ನಿಷ್ಠಾವಂತ ಕಾರ್ಯಕರ್ತರು ಅತಿ ಹೆಚ್ಚು ಇರುವುದು ಚನ್ನಪಟ್ಟಣದಲ್ಲೇ. ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ರಾಮನಗರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ನಾನು ಸೋತಿರಬಹುದು ಆದರೆ ರಾಮನಗರದ ಜನ ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ. ಅದು ವರ್ಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Leave A Reply

Your email address will not be published.