Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

‘ನಾವು ಯಾವತ್ತೂ ಸುಳ್ಳು ಆಶ್ವಾಸನೆ ಕೊಡಲ್ಲ’- ರಾಹುಲ್ ಗಾಂಧಿ

0

ಮೈಸೂರು:ನಮ್ಮ ಕೈಯಲ್ಲಿ ಮಾಡುವ ಕೆಲಸ ಆಗಿದ್ದರೆ ಅದನ್ನು ಖಂಡಿತಾ ಮಾಡುತ್ತೇವೆ. ನಾವು ಯಾವತ್ತೂ ನಿಮಗೆ ಸುಳ್ಳು ಹೇಳುವುದಿಲ್ಲ. ಸುಳ್ಳು ಆಶ್ವಾಸನೆ ಕೊಡುವುದಿಲ್ಲ ಎಂದು  ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಉದ್ಘಾಟನೆ ಬಳಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಏಳಿಗೆಗೆ ಮಹಿಳೆಯರು ಮಾತ್ರ ಕಾರಣರು. ರಾಜ್ಯದ ಅಭಿವೃದ್ಧಿ ಆಗಿರೋದು ಮಹಿಳೆಯರಿಂದ. ಗೃಹಲಕ್ಷ್ಮಿ ಯೋಜನೆ ಅದು ಜನರ ಯೋಜನೆ. ಈ ಯೋಜನೆ ರೂಪಿಸಿರುವುದು ಯಾವುದೇ ಥಿಂಕ್ ಟ್ಯಾಂಕರ್ಸ್ ಗಳಲ್ಲ, ಬಂಡವಾಳಶಾಯಿಗಳಲ್ಲ. ನಿಮ್ಮಿಂದಲೇ ನಿಮಗಾಗಿ ರೂಪವಾದ ಯೋಜನೆ ಇದಾಗಿದೆ ಎಂದರು.

ಚುನಾವಣೆ ಮೊದಲು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನೀಡಿತ್ತು. ಕಾಂಗ್ರೆಸ್ ನಾಯಕರು ಏನ್ ಹೇಳುತ್ತಾರೋ ಅದನ್ನು ಮಾಡುತ್ತಾರೆ. ನುಡಿದಂತೆ ಕಾಂಗ್ರೆಸ್ ನಾಯಕರು ನಡೆಯುತ್ತಾರೆ. ಪ್ರತಿ ತಿಂಗಳು ಇನ್ನು ಮುಂದೆ ಎಲ್ಲಾ ಮಹಿಳೆಯರ ಅಕೌಂಟ್‍ಗೆ 2 ಸಾವಿರ ಹಣ ಬರುತ್ತದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಬಗ್ಗೆ ಹೇಳಿದ್ದೆವು. ಅದನ್ನು ಈಗ ಅನುಷ್ಠಾನ ಮಾಡಿದ್ದೇವೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಈ ಗ್ಯಾರಂಟಿ ಕಾರ್ಡ್ ನೋಡಿದ ಮೇಲೆ ಇವುಗಳ ಜಾರಿ ಅಸಾಧ್ಯ ಅಂತಾ ಹೇಳಿತ್ತು. ಪ್ರಧಾನ ಮಂತ್ರಿಗಳೇ ಕಾಂಗ್ರೆಸ್ ಸುಳ್ಳು ಹೇಳುತ್ತಿರುವುದು ಅಂತಾ. ಇವತ್ತು ಕರ್ನಾಟಕದ ಜನರ ಮುಂದೆ ಸತ್ಯ ಕಾಣುತ್ತಿದೆ. ಭಾರತದ ದೇಶದಲ್ಲೆ ಅತ್ಯಂತ ದೊಡ್ಡ ಯೋಜನೆ ಇದು. ವಿಶ್ವದಲ್ಲೇ ಯಾವ ಪ್ರದೇಶದ ಸರ್ಕಾರವೂ ಮಹಿಳೆಯರಿಗೆ ಇಷ್ಟು ಪ್ರಮಾಣದ ಹಣ ನೀಡಿಲ್ಲ ಎಂದು ಹೇಳಿದರು.

Leave A Reply

Your email address will not be published.