Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಬಿಜೆಪಿ ಯಡಿಯೂರಪ್ಪ ಇಲ್ಲದ ಖಾಲಿ ಡಬ್ಬ ಆಗಿದೆ – ಸಚಿವ ಜಮೀರ್ ವ್ಯಂಗ್ಯ

0

ವಿಜಯನಗರ : ಯಡಿಯೂರಪ್ಪನವರ ಬಳಿಕ ಬಿಜೆಪಿಗೆ ಲೀಡರೇ ಇಲ್ಲದ ಖಾಲಿ ಡಬ್ಬ ಆಗಿದೆ ಎಂದು ಸಚಿವ ಜಮೀರ್ ಅಹಮ್ಮದ್ ಖಾನ್ ವ್ಯಂಗ್ಯವಾಡಿದ್ದಾರೆ. ವಿಜಯನಗರ ಜಿಲ್ಲೆಯ ಹಡಗಲಿಯಲ್ಲಿ ಮಾತನಾಡಿದ ಸಚಿವರು, ರಾಜ್ಯ ಬಿಜೆಪಿಯಲ್ಲಿ ಸದ್ಯ ನಾಯಕರಿಲ್ಲದ ಪಕ್ಷವಾಗಿದೆ‌. ಡಬ್ಬಿಯಲ್ಲಿ ಕಡ್ಡಿ ಇದ್ರೆ ಅಲ್ವಾ ಉರಿಯೋದು. ಇದ್ದಿದ್ದು ಒಂದೇ ಕಡ್ಡಿ, ಅದು ಯಡಿಯೂರಪ್ಪನವರು. ಅವರು ಹೋದ ಬಳಿಕ ಬಿಜೆಪಿ ಖಾಲಿ ಡಬ್ಬಿಯಾಗಿಬಿಟ್ಟಿದೆ ಎಂದರು. ಬಿಜೆಪಿಗೆ ಇನ್ನು ವಿಪಕ್ಷ ನಾಯಕರನ್ನೇ ಆಯ್ಕೆ ಮಾಡೋಕೆ ಆಗಲಿಲ್ಲ. ಅವರು ಊಹೇನೂ ಮಾಡಿದ್ದಿಲ್ಲ, ಇಷ್ಟು ಸೀಟ್ ಬರ್ತದೆ ಕಾಂಗ್ರೆಸ್‌ದು ಅಂತ. ಬಿಜೆಪಿ ನಾಯಕರಿಗೆ ಸಹಿಸಿಕೊಳ್ಳಲು ಆಗ್ತಿಲ್ಲ. ಡಿಸಿಎಂ ಡಿಕೆ ಶಿವಕುಮಾರ್ ಅವರ ಬಗ್ಗೆ ಸಹಿಸಿಕೊಳ್ಳಲು ಆಗ್ತಿಲ್ಲ. ಅವರು ಇರೋದೆ ಟೀಕೆ ಮಾಡೋಕೆ, ವಿಪಕ್ಷದ ಕೆಲಸ ಅದು ಮಾಡಲಿ ಎಂದರು.

Leave A Reply

Your email address will not be published.