Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಬಿಜೆಪಿ ಸಂಸದನ ಮನೆಯಲ್ಲಿ ಬಾಲಕನ ಶವ ಪತ್ತೆ- ಪೊಲೀಸರಿಂದ ತನಿಖೆ

0

ಅಸ್ಸಾಂ: ಬಿಜೆಪಿ ಸಂಸದ ರಾಜದೀಪ್ ರಾಯ್ ಅವರ ನಿವಾಸದಲ್ಲಿ 10 ವರ್ಷದ ಬಾಲಕನ ಶವ ಪತ್ತೆ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುತ್ತಿಗೆಗೆ ಬಟ್ಟೆ ಸುತ್ತಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ ಎಂದು ಕ್ಯಾಚಾರ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಬ್ರತಾ ಸೇನ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಧೋಲೈ ಪ್ರದೇಶದವರಾದ  ಬಾಲಕ  ತಾಯಿ ಸಿಲ್ಚಾರ್‌ನಲ್ಲಿರುವ ಬಿಜೆಪಿ ನಾಯಕನ ಮನೆಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಮನೆಗೆಲಸ ಮಾಡಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಮನೆಕೆಲಸದಾಕೆಯ ಮಗ ನೇಣು ಬಿಗಿದುಕೊಂಡಿರುವ ಕುರಿತು ಕರೆ ಬಂದಿತ್ತು ಕೂಡಲೇ ಮನೆಗೆ ಬಂದು ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ವೇಳೆ ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ರಾಜ್‌ದೀಪ್‌ ಹೇಳಿಕೆ ನೀಡಿದ್ದಾರೆ.

ಮನೆಕೆಲಸದ ಕುಟುಂಬ ಸಂಸದರ ಮನೆಯ ಮೊದಲ ಮಹಡಿಯಲ್ಲಿ ನೆಲೆಸಿದ್ದರು. ಅಲ್ಲದೆ ಒಳ್ಳೆಯ ಸಂಸ್ಕಾರವನ್ನು ಹೊಂದಿದ ಕುಟುಂಬ ಎಂದು ಸಂಸದ ರಾಜದೀಪ್ ರಾಯ್ ಹೇಳಿದ್ದಾರೆ. ಅಷ್ಟು ಮಾತ್ರವಲ್ಲದೆ ಬಾಲಕನೂ ಉತ್ತಮ ನಡತೆ ಹೊಂದಿದ್ದ ಎಂದು ಹೇಳಿದ್ದರು.

ಪ್ರಾಥಮಿಕ ತನಿಖೆಯಲ್ಲಿ ಇದು ಆತ್ಮಹತ್ಯೆ ಎಂದು ಕಂಡುಬಂದಿದ್ದು, ಆತ್ಮಹತ್ಯೆಗೂ ಮೊದಲು ಬಾಲಕ ವಿಡಿಯೋ ಗೇಮ್ ಆಡಲು ತಾಯಿ ಬಳಿ ಮೊಬೈಲ್ ಕೇಳಿದ್ದ ಎನ್ನಲಾಗಿದೆ ಇದಕ್ಕೆ ತಾಯಿ ಮೊಬೈಲ್ ಕೊಡದಿದ್ದಾಗ ಕೋಪಗೊಂಡಿದ್ದನಂತೆ. ಇದಾದ ಬಳಿಕ ತಾಯಿ ತನ್ನ ಸಹೋದರಿಯ ಜೊತೆ ಮಾರುಕಟ್ಟೆಗೆ ಹೋಗಿ ಬರುವಷ್ಟರಲ್ಲಿ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಷಕರು ಹೇಳಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಿಲ್ಚಾರ್ ವೈದ್ಯಕೀಯ ಕಾಲೇಜಿಗೆ ರವಾನೆ ಮಾಡಿದ್ದಾರೆ.ಆದರೆ ಬಾಲಕ ಆತ್ಮಹತ್ಯೆಗೆ ಕಾರಣ ಗೊತ್ತಾಗಬೇಕಾಗಿದೆ.ಇದೀಗ ಪೊಲೀಸರು ತನಿಖೆ ನಡೆಸಲಿದ್ದಾರೆ.

Leave A Reply

Your email address will not be published.