Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಬೆಂಗಳೂರು: ದಯವಿಟ್ಟು ಊಹಾಪೋಹ ಎಬ್ಬಿಸಬೇಡಿ: ಪುತ್ರಿ ನಿಧನಕ್ಕೆ ಹರಿಪ್ರಸಾದ್ ಕಣ್ಣೀರು

0

ಬೆಂಗಳೂರು: ಎರಡು ದಿನಗಳ ಹಿಂದೆಯಷ್ಟೇ ಸಂಬಂಧಿಗಳ ಜೊತೆಯಲ್ಲಿಯೇ ಸ್ಪಂದನಾ ಬ್ಯಾಂಕಾಕ್​ಗೆ ಹೋಗಿದ್ದರು. ವಿಜಯ್ ರಾಘವೇಂದ್ರ ಅವರ ಶೂಟಿಂಗ್ ಸಹ ಅಲ್ಲೇ ನಡೆಯುತ್ತಿತ್ತು. ಶೂಟಿಂಗ್ ಮುಗಿಸಿದ ನಂತರ ವಿಜಯ್ ರಾಘವೇಂದ್ರ ಸಹ ಸ್ಪಂದನಾ ಬಳಿ ಹೋಗಿದ್ದರು. ಆದರೆ ಮಲಗಿದ್ದ ಸ್ಪಂದನಾ ಎದ್ದಿಲ್ಲ. ಹೃದಯಾಘಾತದಿಂದ ಸ್ಪಂದನಾ ನಿಧನ ಆಗಿರೋದು ನಿಜ ಎಂದು ಸ್ಪಂದನಾ ದೊಡ್ಡಪ್ಪ, ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ನಾನೇ ಬ್ಯಾಂಕಾಕ್​ಗೆ ಹೋಗುವ ಪ್ರಯತ್ನ ಮಾಡುತ್ತೇನೆ. ನಾಳೆ ಬೆಳಗ್ಗೆ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲು ಪ್ರಯತ್ನ ಮಾಡುತ್ತೇವೆ. ಮರಣೋತ್ತರ ಶವ ಪರೀಕ್ಷೆಯ ನಂತರವೇ ಸಾವಿಗೆ ಕಾರಣ ತಿಳಿಯಲಿದೆ. ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳು ಬೇಡ. ಮಗಳು ಸ್ವಲ್ಪ ವೀಕ್, ಆದ್ರೆ ಅನಾರೋಗ್ಯವೇನು ಇರಲಿಲ್ಲ. ಅಲ್ಲಿಯವರೆಗೆ ಯಾವುದೇ ಊಹಾಪೋಹ ಸುದ್ದಿಗಳನ್ನು ಬಿತ್ತರಿಸಬೇಡಿ. ವರದಿ ಬಂದ ನಂತರ ನೀವು ಸುದ್ದಿ ಪ್ರಕಟಿಸಿ ಎಂದು ಬಿಕೆ ಹರಿಪ್ರಸಾದ್ ಮನವಿ ಮಾಡಿಕೊಂಡರು. ಪುತ್ರ ಶೌರ್ಯ ಬೆಂಗಳೂರಿನಲ್ಲಿಯೇ ಇದ್ದಾನೆ. ಅಂತಿಮ ವಿಧಿವಿಧಾನಗಳ ಬಗ್ಗೆ ಕುಟುಂಬದ ಜೊತೆ ಚರ್ಚಿಸಿ ತಿಳಿಸಲಾಗುವುದು ಎಂದು ಹೇಳಿದರು.

Leave A Reply

Your email address will not be published.