Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಭಾಷಣದ ವೇಳೆ ಸಿಎಂ ಸಿದ್ದು ಯಡವಟ್ಟು : ವಿಡಿಯೋ ವೈರಲ್

0

ಕಲಬುರಗಿ : ಕಲಬುರಗಿ ಜಿಲ್ಲೆಯಲ್ಲಿಂದು ಗೃಹಜ್ಯೋತಿ ಯೋಜನೆಗೆ ಅಧಿಕೃತ ಚಾಲನೆ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ಭಾಷಣದ ಭರಾಟೆಯಲ್ಲಿ ಬಿಜೆಪಿ ಎನ್ನುವ ಬದಲು ಕಾಂಗ್ರೆಸ್ ಎನ್ನುತ್ತಾ ಯಡವಟ್ಟು ಮಾಡಿಕೊಂಡಿದ್ದಾರೆ. ಈ ಅನ್ನಭಾಗ್ಯ ಕಾರ್ಯಕ್ರಮಕ್ಕೆ ಗುಲ್ಲು ಎಬ್ಬಿಸಿದ್ರು. ಬಿಜೆಪಿಯವರು ಬಡವರ ವಿರೋಧಿಗಳು ಅನ್ನೋದಕ್ಕೆ ಇದೇ ಒಂದು ನಿದರ್ಶನ. FCI ನವರು ನಮಗೆ ಹೆಚ್ಚುವರಿಯಾಗಿ ಬೇಕಾಗಿದ್ದ 2 ಲಕ್ಷದ 29 ಸಾವಿರ ಮೆಟ್ರಿಕ್ ಟನ್ ಅಕ್ಕಿಯನ್ನ ಕೊಡ್ತೀವಿ ಅಂತಾ ಒಪ್ಪಿಕೊಂಡಿದ್ರು. ಕೇಂದ್ರದ ಕಾಂಗ್ರೆಸ್ ಸರ್ಕಾರ FCIನವರಿಗೆ ಹೇಳಿ ಅಕ್ಕಿ ಕೊಡದಂತೆ ಮಾಡಿದ್ರು. ಅಕ್ಕಿಯಲ್ಲೂ ರಾಜಕೀಯ ಮಾಡಿದ್ರು ಎಂದರು. ಕೂಡಲೇ ಸಭೆಯಲ್ಲಿದ್ದವರು ಕೂಗಾಡುತ್ತಿದ್ದಂತೆ ಕಾಂಗ್ರೆಸ್ ಅಲ್ಲ ಬಿಜೆಪಿ ಸರ್ಕಾರ ಅಕ್ಕಿಯಲ್ಲೂ ರಾಜಕೀಯ ಮಾಡಿದೆ ಎಂದು ಗುಡುಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಳತಾಣಗಳಲ್ಲಿ ವೈರಲ್ ಆಗಿದೆ. ನಮ್ಮದು ನುಡಿದಂತೆ ನಡೆಯುವ ಸರ್ಕಾರ 200 ಯೂನಿಟ್‌ವರೆಗೆ ವಿದ್ಯುತ್ ನಾವು ಫ್ರೀ ಆಗಿ ಕೊಡ್ತಿದ್ದೇವೆ. ಈಗಾಗಲೇ 1 ಕೋಟಿ 21 ಸಾವಿರ ಜನ ಗೃಹಜ್ಯೋತಿಗಾಗಿ ನೊಂದಾಯಿಸಿ ಕೊಂಡಿದ್ದಾರೆ ಅವರೆಲ್ಲ ಇದರ ಲಾಭ ಪಡೆಯಲ್ಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Leave A Reply

Your email address will not be published.