Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

‘ಭಿನ್ನಾಭಿಪ್ರಾಯವಿದ್ದಾಗ ಗಂಡ-ಹೆಂಡತಿಯನ್ನು ಒಟ್ಟಿಗೆ ಇಡಬಾರದು’ : ಸುಪ್ರೀಂ ತೀರ್ಪು

0

ನವದೆಹಲಿ : ವಿವಾಹ ಸಂಬಂಧ ಮುರಿದುಬೀಳುವ ಅಂಚಿನಲ್ಲಿರುವಾಗ ಮತ್ತು ಅದನ್ನು ಉಳಿಸಲು ಯಾವುದೇ ಅವಕಾಶವಿಲ್ಲದಿದ್ದಾಗ, ಗಂಡ ಮತ್ತು ಹೆಂಡತಿಯನ್ನು ಒಟ್ಟಿಗೆ ಇಡುವುದು ಕ್ರೌರ್ಯಕ್ಕೆ ಸಮಾನವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ವಿಚ್ಛೇದನ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ನಿರಂತರ ಕಹಿ, ಭಾವನೆಗಳ ಹಾನಿ ಮತ್ತು ದೀರ್ಘಕಾಲದ ಪ್ರತ್ಯೇಕತೆಗೆ ಕಾರಣವಾಗುವ ಸಂದರ್ಭಗಳನ್ನು ‘ವಿವಾಹದ ಸರಿಪಡಿಸಲಾಗದ ಕುಸಿತ’ ಪ್ರಕರಣವೆಂದು ಪರಿಗಣಿಸಬಹುದು ಎಂದು ನ್ಯಾಯಪೀಠ ಹೇಳಿದೆ. ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರ ನ್ಯಾಯಪೀಠವು ವಿವಾಹ ವಿಸರ್ಜನೆಗೆ ಸಂವಿಧಾನದ 142ನೇ ವಿಧಿಯನ್ನು ಬಳಸುವಾಗ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ‘ವಿವಾಹವು ಸರಿಪಡಿಸಲಾಗದಷ್ಟು ಮುರಿದುಹೋದಾಗ ವಿಸರ್ಜನೆಯೊಂದೇ ಪರಿಹಾರ ಎಂದು ನ್ಯಾಯಪೀಠ ಹೇಳಿದೆ. ವಿವಾಹ ವಿಸರ್ಜನಾ ಕುರಿತ ತನ್ನ ಇತ್ತೀಚಿನ ಎರಡು ನಿರ್ಣಯಗಳನ್ನು ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ. ಒಂದು ರೀತಿಯಲ್ಲಿ ಮುರಿದುಬಿದ್ದ ಮದುವೆಗಳನ್ನು ಕ್ರೌರ್ಯದ ಆಧಾರದ ಮೇಲೆ ರದ್ದುಗೊಳಿಸಬಹುದು ಎಂದು ಅದು ತೀರ್ಪಿನಲ್ಲಿ ತಿಳಿಸಿದೆ. ‘ಮಕ್ಕಳ ಹಿತದೃಷ್ಟಿಯಿಂದ, ಗಂಡ ಮತ್ತು ಹೆಂಡತಿ ಇಬ್ಬರೂ ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಒಟ್ಟಿಗೆ ವಾಸಿಸಲು ನಿರ್ಧರಿಸಿದರೆ, ಇದಕ್ಕಿಂತ ಹೆಚ್ಚಿನ ತೃಪ್ತಿಯನ್ನು ಬೇರೆ ಯಾವುದೂ ನಮಗೆ ನೀಡುವುದಿಲ್ಲ’ ಎಂದು ಸುಪ್ರೀಂ ತನ್ನ ತೀರ್ಪಿನಲ್ಲಿ ತಿಳಿಸಿದೆ.

Leave A Reply

Your email address will not be published.