Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

‘ಮಹಾ’ ಸಂಪುಟ ಪುನಾರಚನೆ ; ‘ಅಜಿತ್ ಪವಾರ್’ಗೆ ಹಣಕಾಸು ಖಾತೆ, ಇಲ್ಲಿದೆ ಮಾಹಿತಿ

0

ಮುಂಬೈ : ಮಹಾರಾಷ್ಟ್ರ ಕ್ಯಾಬಿನೆಟ್’ನ ಪ್ರಮುಖ ಪುನಾರಚನೆಯಲ್ಲಿ ಸಿಎಂ ಶಿಂಧೆ ಹಣಕಾಸು ಇಲಾಖೆಯನ್ನ ನೂತನ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಹಂಚಿಕೆ ಮಾಡಿದ್ದಾರೆ. ಜುಲೈ 2ರಂದು ಅಜಿತ್ ಪವಾರ್ ಅವರೊಂದಿಗೆ ಪ್ರಮಾಣವಚನ ಸ್ವೀಕರಿಸಿದ ಹೊಸ ಸಚಿವರಿಗೆ ಶಿವಸೇನೆಯಿಂದ ಒಟ್ಟು ಮೂರು ಮತ್ತು ಬಿಜೆಪಿಯಿಂದ ಆರು ಸಚಿವಾಲಯಗಳನ್ನ ಹಂಚಿಕೆ ಮಾಡಲಾಗಿದೆ.

ಏಕನಾಥ್ ಶಿಂಧೆ ಅವರ ಶಿವಸೇನೆ ಕೃಷಿ, ಪರಿಹಾರ ಮತ್ತು ಪುನರ್ವಸತಿ ಮತ್ತು ಆಹಾರ ಮತ್ತು ಔಷಧ ಆಡಳಿತ ಸಚಿವಾಲಯಗಳನ್ನ ಬಿಟ್ಟುಕೊಡಬೇಕಾಯಿತು. ದೇವೇಂದ್ರ ಫಡ್ನವೀಸ್ ಅವರ ಬಿಜೆಪಿ ಹಣಕಾಸು, ಸಹಕಾರ, ವೈದ್ಯಕೀಯ ಶಿಕ್ಷಣ, ಆಹಾರ ಮತ್ತು ನಾಗರಿಕ ಸರಬರಾಜು, ಕ್ರೀಡೆ ಮತ್ತು ಯುವ ಕಲ್ಯಾಣ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳನ್ನ ಬಿಟ್ಟುಕೊಡಬೇಕಾಯಿತು.

ಮಾಸ್ಟರ್​ ಆನಂದ್​ ಪುತ್ರಿ ವಂಶಿಕಾ ಹೆಸರಲ್ಲಿ ಲಕ್ಷಾಂತರ ಹಣ ವಂಚನೆ; ಯುವತಿಯ ಬಂಧನ

ಯಾವ ಖಾತೆ ಯಾರಿಗೆ.? ಇಲ್ಲಿದೆ.!
* ದೇವೇಂದ್ರ ಫಡ್ನವೀಸ್ ಅವರಿಂದ ಹಣಕಾಸು ಮತ್ತು ಯೋಜನಾ ಇಲಾಖೆಯನ್ನ ಅಜಿತ್ ಪವಾರ್ ವಹಿಸಿಕೊಂಡಿದ್ದಾರೆ.
* ಬಿಜೆಪಿಯ ರವೀಂದ್ರ ಚವಾಣ್ ಅವರಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯನ್ನು ಛಗನ್ ಭುಜ್ಬಲ್ ವಹಿಸಿಕೊಳ್ಳಲಿದ್ದಾರೆ.
* ದಿಲೀಪ್ ವಾಲ್ಸೆ ಪಾಟೀಲ್ ಸಹಕಾರ ಸಚಿವರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರು ಬಿಜೆಪಿಯ ಅತುಲ್ ಸೇವ್ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
* ಬಿಜೆಪಿಯ ಗಿರೀಶ್ ಮಹಾಜನ್ ಅವರಿಂದ ಹಸನ್ ಮುಶ್ರಿಫ್ ವೈದ್ಯಕೀಯ ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
* ಧರ್ಮರಾವ್ ಅತ್ರಮ್ ಅವರಿಗೆ ಆಹಾರ ಮತ್ತು ಔಷಧ ಖಾತೆಯನ್ನು ನೀಡಲಾಗಿದೆ. ಅವರು ಶಿವಸೇನೆಯ ಸಂಜಯ್ ರಾಥೋಡ್ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
* ಅದಿತಿ ತಟ್ಕರೆ ಅವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಕ್ಕಿದೆ. ಅವರು ಬಿಜೆಪಿಯ ಮಂಗಲ್ ಪ್ರಭಾತ್ ಲೋಧಾ ಅವರಿಂದ ಇಲಾಖೆಯ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ.
* ಸಂಜಯ್ ಬನ್ಸೋಡೆ ಅವರಿಗೆ ಕ್ರೀಡಾ ಮತ್ತು ಯುವ ಕಲ್ಯಾಣ ಸಚಿವಾಲಯವನ್ನು ನೀಡಲಾಗಿದೆ. ಅವರು ಬಿಜೆಪಿಯ ಗಿರೀಶ್ ಮಹಾಜನ್ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

Leave A Reply

Your email address will not be published.