Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ರಾಜ್ಯದ 205 ಮುಜರಾಯಿ ದೇವಸ್ಥಾನಗಳಲ್ಲಿ ಹಾಲುಣಿಸುವ ಕೊಠಡಿ : ಸಚಿವ ರಾಮಲಿಂಗಾರೆಡ್ಡಿಚಾಲನೆ

0

ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ಎ ಮತ್ತು ಬಿ ದರ್ಜೆ ದೇವಾಲಯಗಳಲ್ಲಿ ಅಗತ್ಯವಿರುವ ಕಡೆ ಮಗುವಿಗೆ ಹಾಲುಣಿಸುವ ಕೊಠಡಿ ನಿರ್ಮಿಸಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಬನಶಂಕರಿ ದೇವಾಲಯದಲ್ಲಿ ‘ಅಮ್ಮನಿಗೆ ಗೌರವ’ ಎಂಬ ಶೀರ್ಷಿಕೆಯಡಿ ಹಾಲುಣಿಸುವ ಕೇಂದ್ರಕ್ಕೆ ಇಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು. ಬಳಿಕ ಯೋಜನೆಯ ಬಗ್ಗೆ ಮಾತನಾಡಿದರು

ರಾಜ್ಯದಲ್ಲಿಸುಮಾರು 200ಕ್ಕೂ ಹೆಚ್ಚು ಎ ದರ್ಜೆಯ ದೇವಾಲಯಗಳ ಜತೆಗೆ ಬಿ ದರ್ಜೆಯ ದೇವಾಲಯಗಳೂ ಸಹಸ್ರಾರು ಸಂಖ್ಯೆಯಲ್ಲಿವೆ. ಇವುಗಳಲ್ಲಿಅಗತ್ಯವಿರುವೆಡೆ ಮಕ್ಕಳಿಗೆ ಹಾಲುಣಿಸುವ ಕೊಠಡಿಗಳು ಹಾಗೂ ಉರುಳುಸೇವೆ ಮಾಡುವವರಿಗೆ ವಸ್ತ್ರ ಬದಲಿಸಲು ಪ್ರತ್ಯೇಕ ಕೊಠಡಿಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ.

 

Leave A Reply

Your email address will not be published.