Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅಪಘಾತ – ಬೆಂಗಳೂರಿನ 13 ವರ್ಷದ ಬೈಕರ್ ಶ್ರೇಯಸ್ ಹರೀಶ್ ಸಾವು

0

ಚೆನ್ನೈ: ಇಂಡಿಯನ್ ನ್ಯಾಷನಲ್ ಮೋಟಾರ್‌ಸೈಕಲ್ ರೇಸಿಂಗ್ ಚಾಂಪಿಯನ್‌ಶಿಪ್ 2023ರ ಭಾಗವಾಗಿ ಶನಿವಾರ ನಡೆದ ರೇಸ್‌ ವೇಳೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಶ್ರೇಯಸ್ ಹರೀಶ್ (13) ತಲೆಗೆ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ. ತಮಿಳುನಾಡಿನ ರಾಜಧಾನಿ ಚೆನ್ನೈನ ಮದ್ರಾಸ್ ಇಂಟರ್‌ನ್ಯಾಶನಲ್ ಸರ್ಕ್ಯೂಟ್‌ನಲ್ಲಿ ಇಂದು ಘಟನೆ ನಡೆದಿದೆ. ಪರಿಣಾಮ ಈವೆಂಟ್ ಮ್ಯಾನೇಜ್‌ಮೆಂಟ್‌ನವರು ಶನಿವಾರ ಮತ್ತು ಭಾನುವಾರದಂದು ನಿಗದಿಯಾಗಿದ್ದ ಉಳಿದ ರೇಸ್‌ಗಳನ್ನು ರದ್ದುಗೊಳಿಸಿದ್ದಾರೆ. ಶ್ರೇಯಸ್ ಹರೀಶ್ ರಾಷ್ಟ್ರಮಟ್ಟದಲ್ಲಿ ಹಲವಾರು ರೇಸ್‌ಗಳನ್ನು ಗೆದ್ದಿದ್ದರು. ಭಾರತೀಯ ಬೈಕ್ ರೇಸರ್ ಶ್ರೇಯಸ್ ಹರೀಶ್ ಬೆಂಗಳೂರಿನವರು. ಅವರು ‘ಬೆಂಗಳೂರು ಕಿಡ್’ ಎಂದು ಜನಪ್ರಿಯರಾಗಿದ್ದರು. ಒಂಬತ್ತನೇ ವಯಸ್ಸಿನಲ್ಲಿ ಬೈಕಿಂಗ್ ಪ್ರಾರಂಭಿಸಿದ್ದರು. 6ನೇ ತರಗತಿಯಲ್ಲಿ ಓದುತ್ತಿದ್ದ ಶ್ರೇಯಸ್ ಕಳೆದ ವರ್ಷ, FIM ಮಿನಿಜಿಪಿ ವರ್ಲ್ಡ್ ಸೀರೀಸ್ ಇಂಡಿಯಾದ ಉದ್ಘಾಟನಾ ಆವೃತ್ತಿಯನ್ನು ಗೆದ್ದಿದ್ದರು.

Leave A Reply

Your email address will not be published.