ಬೆಂಗಳೂರು: ಕೇಂದ್ರ ಗುಪ್ತಚರ ಮಾಹಿತಿ ಮೇರೆಗೆ ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರು ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಕನಕನಗರ ಬಳಿಯ ಸುಲ್ತಾನ್ ಪಾಳ್ಯ ಮಸೀದಿ ಬಳಿ ಟೆರರ್ ಮೀಟಿಂಗ್ ವೇಳೆ ಆರೋಪಿಗಳು ಸಿಸಿಬಿ ಬಲಗೆ ಬಿದ್ದಿದ್ದಾರೆ. 2017ರಲ್ಲಿ ಆರ್ಟಿ ನಗರದ ನೂರ್ ಕೊಲೆ ಕೇಸ್ನಲ್ಲಿ ಬಂಧನವಾಗಿದ್ದ ಆರೋಪಿಗಳ ಪೈಕಿ ಐವರು ಟೆರರ್ ಲಿಂಕ್ ಪಡೆದಿದ್ದರು ಎಂದು ಹೇಳಲಾಗುತ್ತಿದೆ. ಕೊಲೆ ಪ್ರಕರಣದ ಪ್ರಮುಖ ಆರೋಪಿ ಜುನೈದ್ ಸದ್ಯ ತಲೆಮರೆಸಿಕೊಂಡಿದ್ದು, ಇವನ ಸಹಚರರಾಗಿರುವ ಸುಹೈಲ್, ಉಮರ್, ತಬ್ರೇಜ್, ಮುದಾಸಿರ್ ಮತ್ತು ಫೈಜಲ್ ರಬ್ಬಾನಿ ಬಂಧಿತ ಆರೋಪಿಗಳಾಗಿದ್ದಾರೆ. ಇನ್ನು ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದಾಗ 2008ರ ಬೆಂಗಳೂರು ಸಿರಿಯಲ್ ಬಾಂಬ್ ಬ್ಲಾಸ್ಟ್ ಕೇಸ್ನ ರುವಾರಿ ನಾಸೀರ್ ಸಂಪರ್ಕದಲ್ಲಿದ್ದ ಜುನೈದ್ ಉಗ್ರ ಚಟುವಟಿಕೆ ಆಸಕ್ತಿ ತೋರಿ ನಾಸೀರ್ ಹೇಳಿದಂತೆ ವಿದ್ವಾಂಸಕ ಕೃತ್ಯ ನಡೆಸಲು ತಯಾರಿ ನಡೆಸಿದ್ದನಂತೆ. ಅಲ್ಲದೆ ಕೊಲೆ ಕೇಸ್ನಲ್ಲಿ ಬೇಲ್ ಮೇಲೆ ಹೊರ ಬಂದ ನಾಸೀರ್ ಮತ್ತೆ ಕೋರ್ಟ್ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ದೂರದಲ್ಲೇ ಕುಳಿತು ಜುನೈದ್ ತನ್ನ ಸ್ನೇಹಿತರನ್ನ ಉಗ್ರ ಚಟುವಟಿಕೆ ಟ್ರೈನಿಂಗ್ ಕೊಡುತ್ತಿದ್ದನಂತೆ. ಇನ್ನು ಸಿಸಿಬಿ ಪೊಲೀಸರು ಆರೋಪಿಗಳ ಬಂಧನಕ್ಕೆ ತೆರಳಿದಾಗ ಸುಹೈಲ್ ಮನೆಯಲ್ಲಿ ಉಗ್ರಚಟುವಟಿಕೆ ಸಂಬಂಧಿಸಿದ ಮೀಟಿಂಗ್ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಆರೋಪಿಗಳ ಬಳಿ ಸಿಕ್ಕಿರುವ ವಸ್ತುಗಳನ್ನ ನೋಡಿ ಸಿಸಿಬಿ ಪೊಲೀಸ್ರೆ ಶಾಕ್ ಆಗಿದ್ದಾರೆ. 7 ಕಂಟ್ರಿ ಮೇಡ್ ಪಿಸ್ತೂಲ್, 42 ಜೀವಂತ ಗುಂಡುಗಳು, ಎರಡು ಸ್ಯಾಟಲೈಟ್ ಫೋನ್ ಮಾದರಿ ವಾಕಿಟಾಕಿ, ಮೊಬೈಲ್ ಫೋನ್ ಮತ್ತು ವಿವಿಧ ಕಂಪನಿ ಸಿಮ್ಗಳು, ಲ್ಯಾಪ್ ಟಾಪ್ ಪತ್ತೆಯಾಗಿವೆ. ಇನ್ನು ಆರೋಪಗಳು ಗ್ರೆನೇಡ್ ಮಾದರಿ ವಸ್ತುಗಳನ್ನು ಶೇಖರಿಸಿರೋ ಮಾಹಿತಿ ಕೂಡ ಇದೆ. ಬೆಂಗಳೂರಿನಲ್ಲಿ 2008 ಸಿರಿಯಲ್ ಬ್ಲಾಸ್ಟ್ಗಿಂತ ದೊಡ್ಡ ಮಟ್ಟದ ವಿದ್ವಂಸಕ ಕೃತ್ಯಕ್ಕೆ ಶಂಕಿತರು ತಯಾರಿ ನಡೆಸಿದ್ದರು ಅನ್ನೋ ಆರೋಪ ಕೇಳಿ ಬಂದಿದೆ. ಸದ್ಯ ಇವರಿಗೆ ಯಾರು ಹಣ ಸಹಾಯ ಮಾಡ್ತಿದ್ರು? ಯಾರ ಸಂಪರ್ಕದಲ್ಲಿದ್ರು? ಇವ್ರ ತಂಡದಲ್ಲಿ ಇನ್ನೂ ಎಷ್ಟು ಜನ ಇದ್ರು? ಎನ್ನುವುದು ತನಿಖೆಯಿಂದ ಗೊತ್ತಾಗಬೇಕಿದೆ.
[vc_row][vc_column]
BREAKING NEWS
- ಚಿಕ್ಕ ರೇವಣಸಿದ್ಧ ಶಿವಶರಣರು ಲಿಂಗೈಕ್ಯ.!
- ಸೆ. 29 ಮತ್ತು 30ರಂದು ಮುಂಬೈ ಲೋಕಮಾನ್ಯ ತಿಲಕ್-ಮಂಗಳೂರು ಜಂಕ್ಷನ್ ರೈಲಿಗೆ ಹೆಚ್ಚುವರಿ ಕೋಚ್ – ರೈಲ್ವೆ ಇಲಾಖೆಯಿಂದ ಅಧಿಕೃತ ಪ್ರಕಟಣೆ
- ಪ್ರಧಾನಿ ಮೋದಿ ಅವರ ಆಸ್ತಿ, ಸಾಲ ಎಷ್ಟಿದೆ ಗೊತ್ತೇ ? – ಕಳೆದ ಬಾರಿಗಿಂತ 15.69 ಶೇಕಡಾ ಆಸ್ತಿ ಏರಿಕೆ..!!
- ‘ಸಂವಿಧಾನಬದ್ದ ಹಕ್ಕುಗಳನ್ನು ರಕ್ಷಿಸುವ ಪಣ ತೊಡಿ’-ನೂತನ ಡಿವೈಎಸ್ ಪಿಗಳಿಗೆ ಸಿಎಂ ಕರೆ
- ಕರಿಬೆಕ್ಕು ಅಂತ ಕರಿ ಚಿರತೆ ಸಾಕಿದ ರಷ್ಯಾದ ಯುವತಿ
- ಪಿಎಫ್ ಐ ಕಾರ್ಯಕರ್ತರಿಂದ ಯೋಧನ ಕಿಡ್ನಾಫ್ ಮಾಡಿ ಹಲ್ಲೆ ಪ್ರಕರಣಕ್ಕೆ ಟ್ವೀಟ್ಸ್ : ತನಿಖೆಯಲ್ಲಿ ಸತ್ಯ ಬಯಲು
- ‘ಧಾರ್ಮಿಕ ಗ್ರಂಥಗಳಿಗೆ ಹಕ್ಕುಸ್ವಾಮ್ಯ ಇಲ್ಲ’- ಹೈಕೋರ್ಟ್
- ‘ಈಗ ಕರ್ನಾಟಕದಲ್ಲಿ ಪೊಲೀಸ್ ಸರ್ಕಾರ ಇದೆ’ – ಬೊಮ್ಮಾಯಿ ವಾಗ್ದಾಳಿ
- ಸಂಪೂರ್ಣ ಬದಲಾದ ಜಿಂಕೆ ಮರಿ ರೇಖಾ – ನಟಿ ಈಗಿನ ಸ್ಥಿತಿ ನೋಡಿ ಶಾಕ್ ಆದ ಅಭಿಮಾನಿಗಳು
- ಹೆಣ್ಣು ಮಗುವಿನ ತಾಯಿಯಾದ ನಟಿ ಸ್ವರಾ ಭಾಸ್ಕರ್