Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಶಾಸಕ ಪ್ರಭು ಚವ್ಹಾಣ್ ಮೇಲೆ 100 ಕೋಟಿ ರೂ ಮಾನನಷ್ಟ ಮೊಕದ್ದಮೆಗೆ ಮುಂದಾದ ಖೂಬಾ

0

ಬೀದರ: ಶಾಸಕ ಪ್ರಭು ಚವ್ಹಾಣ ನನ್ನ ವಿರುದ್ದ ಗಂಭೀರ ಆರೋಪ ಮಾಡಿ ಚಾರಿತ್ರೆಗೆ ಧಕ್ಕೆ ತಂದಿದ್ದಾರೆ. ಅವರ ವಿರುದ್ಧ ನೂರು ಕೋಟಿ ರೂ. ಮಾನನಷ್ಟ ಮೊಕದ್ದಮೆ ಹಾಕಲು ಚಿಂತನೆ ನಡೆಸಿದ್ದೇನೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು , ಮುಂದಿನ ಏಳು ಜನ್ಮ ಹಾಗೂ ಹಿಂದಿನ ಏಳು ಜನ್ಮದಲ್ಲೂ ಈ ರೀತಿ ನೀಚ ಕೃತ್ಯ ಮಾಡುವ ಯೋಚನೆ ನನ್ನಲ್ಲಿ ಬರಲ್ಲ. ಶಾಸಕ ಚವ್ಹಾಣ ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದು, ಅದಕ್ಕಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

 

ಜಿಲ್ಲೆಯಲ್ಲಿ ಬಿಜೆಪಿ ಅಂದರೆ ನಾನು, ನಾನು ಅಂದರೆ ಬಿಜೆಪಿ ಎಂಬ ಅಹಂಕಾರ ಚವ್ಹಾಣ ಬೆಳಿಸಿಕೊಂಡಿದ್ದಾರೆ. ಚವ್ಹಾಣ ಅವರ ಆರೋಪ ಕುರಿತಂತೆ ಪಕ್ಷದ ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ ಎಂದರು.

ಇಬ್ಬರ ನಡುವಿನ ಗೊಂದಲವನ್ನು ಬಗೆಹರಿಸುವುದಾಗಿ ಹೈಕಮಾಂಡ್‌ ಭರವಸೆ ನೀಡಿದ್ದಾರೆ. ಇದು ಬಗೆಹರಿಯದೇ ಹೋದರೆ ಪಕ್ಷದ ಅನುಮತಿ ಪಡೆದು ಮಾನನಷ್ಟ ಮೊಕದ್ದಮೆಗೆ ಮುಂದಾಗುವುದು ಎಂದು ತಿಳಿಸಿದರು.

Leave A Reply

Your email address will not be published.