Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

[/vc_column][/vc_row]

ಸ್ಪಂದನಾ ಸಾವಿನ ಬಗ್ಗೆ ದಯವಿಟ್ಟು ಊಹಾಪೋಹ ಎಬ್ಬಿಸಬೇಡಿ – ಬಿ.ಕೆ ಹರಿಪ್ರಸಾದ್

0

ಬೆಂಗಳೂರು: ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಅವರ ಸಾವಿನ ಬಗ್ಗೆ ದಯವಿಟ್ಟು ಊಹಾಪೋಹಗಳನ್ನು ಹಬ್ಬಿಸಬೇಡಿ. ಪರ್ಸನಲ್ ಲೈಫ್ ಇರುತ್ತೆ ಎಂದು ಸ್ಪಂದನಾ ಅವರ ತಂದೆ ಬಿ.ಕೆ ಶಿವರಾಂ ಸಹೋದರ ಬಿ.ಕೆ ಹರಿಪ್ರಸಾದ್ ಮನವಿ ಮಾಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪಂದನಾ ಅವರ ಸಾವಿನ ಬಗ್ಗೆ ದಯವಿಟ್ಟು ಊಹಾಪೋಹಗಳಿಗೆ ಅವಕಾಶ ಕೊಡಬೇಡಿ. ಸ್ಪಂದನಾ ತನ್ನ ಕಸಿನ್ಸ್ ಜೊತೆಗೆ ಟ್ರಿಪ್ ಹೋಗಿದ್ರು. ವಿಜಯ ರಾಘವೇಂದ್ರಗೆ ಚಿತ್ರೀಕರಣ ಇತ್ತು. ಅದನ್ನು ಮುಗಿಸಿಕೊಂಡು ಅವರು ಕೂಡ ಸೇರಿಕೊಂಡಿದ್ದಾರೆ ಎಂದರು.

ಇನ್ನು ವಿಜಯ ರಾಘವೇಂದ್ರ ಕೂಡ ಶೂಟಿಂಗ್ ಮುಗಿಸಿ ಅಲ್ಲಿಯೇ ಹೋಗಿದ್ದಾರೆ. ಪೋಸ್ಟ್ ಮಾರ್ಟಂ ರಿಪೋರ್ಟ್ ಆಗ್ತಿದೆ ಎಂದಿದ್ದಾರೆ.

ದಯವಿಟ್ಟೂ ಊಹಾಪೋಹ ಮಾಡಬೇಡಿ ಪರ್ಸನಲ್ ಲೈಫ್ ಇರುತ್ತೆ. ಮಗ ಸದ್ಯ ಇಲ್ಲೆ ಇದ್ದಾನೆ. ಅಂತ್ಯಕ್ರಿಯೆಯ ಬಗ್ಗೆ ಮೃತದೇಹ ಸಿಕ್ಕ ಬಳಿಕ ನಿರ್ಧಾರ ಮಡುತ್ತೇವೆ ಎಂದು ತಿಳಿಸಿದ್ದಾರೆ.

Leave A Reply

Your email address will not be published.