ಹಾಸನ: ರಾಜ್ಯದ ಅನೇಕರು ಎಪಿಎಲ್, ಬಿಪಿಎಲ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿ, ಪಡಿತರ ಚೀಟಿಗಾಗಿ ಕಾಯುತ್ತಿದ್ದಾರೆ. ಅಂತಹವರಿಗೆ ಶೀಘ್ರವೇ ಕಾರ್ಡ್ ವಿತರಿಸೋದಾಗಿ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ತಿಳಿಸಿದ್ದಾರೆ.
ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಆಹಾರ ಇಲಾಖೆಯ ಹೊಸ ಮಾನದಂಡದ ಕಾರಣದಿಂದಾಗಿ ರಾಜ್ಯದ ಅನೇಕ ಬಿಪಿಎಲ್, ಎಪಿಎಲ್ ಕಾರ್ಡ್ ರದ್ದಾಗೋ ಭಯ ಪಡಿತರ ಫಲಾನುಭವಿಗಳಲ್ಲಿ ಉಂಟಾಗಿತ್ತು. ಆದ್ರೇ ಯಾವುದೇ ಕಾರ್ಡ್ ರದ್ದು ಮಾಡೋದಿಲ್ಲ ಎಂಬುದಾಗಿ ಸಚಿವರು ಹೇಳಿದರು.