Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

[/vc_column][/vc_row]

ಪಶುಪತಿನಾಥ ದೇವಸ್ಥಾನದಲ್ಲಿ10 ಕೆಜಿ ಚಿನ್ನ ನಾಪತ್ತೆ.! ದೇವಸ್ಥಾನ ತಾತ್ಕಾಲಿಕ ಬಂದ್.!

0

 

ಕಠ್ಮಂಡು: ಹೌದು ಕಠ್ಮಂಡುವಿನಲ್ಲಿರುವ ಪಶುಪತಿನಾಥ ದೇವಸ್ಥಾನದಲ್ಲಿ10 ಕೆಜಿ ಚಿನ್ನ ಕಳವಾಗಿದೆ! ಶಿವಲಿಂಗದ ಮೇಲಿನ 100 ಕೆ.ಜಿ. ತೂಕದ ಚಿನ್ನದ ಆಭರಣದಲ್ಲಿ 10 ಕೆ.ಜಿ. ಚಿನ್ನ ನಾಪತ್ತೆಯಾಗಿದೆ. ಈ ಸಂಬಂಧ ನೇಪಾಳದ ತನಿಖಾ ಸಂಸ್ಥೆ ತನಿಖೆ ಆರಂಭಿಸಿದ್ದು ದೇವಸ್ಥಾನ ತಾತ್ಕಾಲಿಕ ಬಂದ್​​ ಆಗಿರಲಿದೆ

ಕಳೆದ ವರ್ಷ ಮಹಾಶಿವರಾತ್ರಿ ಉತ್ಸವದ ಸಂದರ್ಭದಲ್ಲಿ ದೇಗುಲದ ಗರ್ಭಗುಡಿಯ ಶಿವಲಿಂಗದ ಸುತ್ತ 103 ಕೆಜಿ ಚಿನ್ನದ ಜಲಹರಿ ನಿರ್ಮಾಣ ಮಾಡಲಾಗಿತ್ತು. ಆದ್ರೆ ಈ 100 ಕೆಜಿ ಚಿನ್ನದ ಪೈಕಿ 10 ಕೆಜಿ ಚಿನ್ನ ನಾಪತ್ತೆಯಾಗಿದೆ.

ಹೀಗಾಗಿ ನೇಪಾಳದ ಭ್ರಷ್ಟಾಚಾರ ವಿರೋಧಿ ಸಂಸ್ಥೆಯು ದೇವಾಲಯವನ್ನು ತನಿಖೆಗಾಗಿ ವಶಕ್ಕೆ ಪಡೆದಿದೆ. ದೇವರ ಚಿನ್ನದ ಆಭರಣವು ಕಾಣೆಯಾದ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆದ ಬಳಿಕ ಸರ್ಕಾರವು ತನಿಖೆಗೆ ನಿರ್ದೇಶನ ನೀಡಿದೆಯಂತೆ.!

Leave A Reply

Your email address will not be published.