Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

‘9 ವರ್ಷಗಳಲ್ಲಿ ಕದ್ದ 231 ಪುರಾತನ ವಸ್ತುಗಳನ್ನು ಭಾರತಕ್ಕೆ ತರಲಾಗಿದೆ’ – ಸಚಿವ ಜಿತೇಂದ್ರ ಸಿಂಗ್

0

ನವದೆಹಲಿ: ಒಂಬತ್ತು ವರ್ಷಗಳಲ್ಲಿ 231 ಕದ್ದ ಪುರಾತನ ವಸ್ತುಗಳನ್ನು ಭಾರತಕ್ಕೆ ತರಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ಸ್ವಾತಂತ್ರ್ಯದ ನಂತರ ಸುಮಾರು 70 ವರ್ಷಗಳ ಕಾಲ ಭಾರತೀಯ ಮೂಲದ ಕೇವಲ 13 ಅಮೂಲ್ಯ ಪರಂಪರೆಯ ಪುರಾತನ ವಸ್ತುಗಳನ್ನು ಹಿಂದಿನ ಸರ್ಕಾರಗಳು ಭಾರತಕ್ಕೆ ಮರಳಿ ತಂದಿದ್ದವು ಎಂದರು.

ಇನ್ನು ಕೆಲವು ತಿಂಗಳ ಹಿಂದೆ ಉದ್ಘಾಟನೆಗೊಂಡ ಹಿಮಾಚಲ ಪ್ರದೇಶದ ಚಂಬಾದ ಮಹತ್ವಾಕಾಂಕ್ಷೆಯ ಜಿಲ್ಲೆಯಲ್ಲಿ ನಾವು ಈಗಾಗಲೇ ವಸ್ತುಸಂಗ್ರಹಾಲಯಗಳನ್ನು ಸ್ಥಾಪಿಸಿದ್ದು, ಕೇರಳದ ವಯನಾಡ್, ಉತ್ತರ ಪ್ರದೇಶದ ಸಿದ್ಧಾರ್ಥನಗರ, ಹರಿಯಾಣದ ನುಹ್, ರಾಜಸ್ಥಾನದ ಧೋಲ್ಪುರ್, ಕರ್ನಾಟಕದ ರಾಯಚೂರು ಮತ್ತು ಪಶ್ಚಿಮ ಬಂಗಾಳದ ಕಲ್ಯಾಣಿ ಇಂತಹ ವಸ್ತುಸಂಗ್ರಹಾಲಯಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ ಅಥವಾ ಶೀಘ್ರದಲ್ಲೇ ಕಾರ್ಯಗತಗೊಳ್ಳಲಿವೆ ಎಂದು ತಿಳಿಸಿದ್ದಾರೆ.

Leave A Reply

Your email address will not be published.