ಬೆಂಗಳೂರು: ಮೀಸಲಾತಿ ಜಾರಿಗೆ ತಂದು ನಾಲ್ಕು ತಿಂಗಳಾದರೂ ಸಂವಿಧಾನದ 9ನೇ ಶೆಡ್ಯೂಲ್ಗೆ ಇನ್ನೂ ಯಾಕೆ ಸೇರ್ಪಡೆ ಮಾಡಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸರ್ಕಾರ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಆದರೆ, ಬಳ್ಳಾರಿಯಲ್ಲಿ ಇದ್ದಾನೆ ಒಬ್ಬ ಪೆದ್ದ ರಾಮುಲು. ಮೀಸಲಾತಿ ಸಿಕ್ಕಿದೆ ಎಂದು ಬಳ್ಳಾರಿಯಲ್ಲಿ ಭಾಷಣ ಮಾಡಿದ್ದೇ ಮಾಡಿದ್ದು.
ಸಂವಿಧಾನಕ್ಕೆ ತಿದ್ದುಪಡಿ ತರದೆ, 9ನೇ ಶೆಡ್ಯೂಲ್ಗೆ ಸೇರಿಸದೆ ಮೀಸಲಾತಿ ರಕ್ಷಣೆ ಹೇಗೆ ಸಾಧ್ಯ ಎಂದು ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.