Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ವರುಣನ ಅಬ್ಬರ – ಆಲಿಕಲ್ಲು ಮಳೆಗೆ ನಗರವಾಸಿಗಳು ತತ್ತರ

0

ಬೆಂಗಳೂರು : ಬಾರಿ ಬಿಸಿಲಿನ ತಾಪಮಾನದಿಂದ ಬೇಸತ್ತಿದ್ದ ರಾಜ್ಯ ರಾಜಧಾನಿ ಬೆಂಗಳೂರಿನ ಜನರಿಗೆ ಮಳೆಯ ಸಿಂಚನವಾಗಿದೆ. ನಗರದ ಹಲವೆಡೆ ಧಾರಾಕಾರವಾಗಿ ಗುಡುಗು ಸಹಿತ ಮಳೆಯಾಗಿದೆ. ಶಿವಾಜಿನಗರ, ಮಲೇಶ್ವರಂ, ಮಾರ್ಕೆಟ್‌, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ಇನ್ನೂ ಮಲೇಶ್ವರಂನ ಮಂತ್ರಿಮಾಲ್‌ನ ಬಳಿ ಆಲಿಕಲ್ಲಿನ ಮಳೆಯಾಗಿದೆ. ನಾಗವಾರ, ಕಾವಲ್ ಬೈರಸಂದ್ರ, ಪ್ರೇಜರ್ ಟೌನ್ ಸೇರಿದಂತೆ ನಗರದ ಹಲವು ಕಡೆ ಗಾಳಿ ಸಹಿತ ಮಳೆಯಾಗಿದೆ. ಮಂಜುನಾಥ ನಗರದಲ್ಲಿ ಮನೆ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದೆ. ಅಲ್ಲದೇ ನಿನ್ನೆ ನಗರದಲ್ಲಿ ಮಳೆಯಾಗಿ ಸಾಕಷ್ಟು ಮರಗಳು ಧರಗೆ ಉರುಳಿದ್ದವು, ಇಂದು ನಗರದಲ್ಲಿ ಮರಗಳು ಉರುಳಿದೆ. ವರುಣನ ಆರ್ಭಟಕ್ಕೆ ಸಿಲಿಕಾನ್ ಸಿಟಿಯ ಜನ ಕಂಗಾಲಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹರ್ಷಧಾರೆಗೆ ಅಂಡರ್ ಪಾಸ್‌ಗಳು ನೀರಿನಿಂದ ಆವೃತವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

Leave A Reply

Your email address will not be published.