ಆದಿತ್ಯ ಎಲ್​-1 ಉಡಾವಣೆ ದಿನವೇ ನನಗೆ ಕ್ಯಾನ್ಸರ್​ ಇರೋದು ಪತ್ತೆಯಾಗಿತ್ತು – ಇಸ್ರೋ ಅಧ್ಯಕ್ಷ ಸೋಮನಾಥ್​

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಎಸ್ ಸೋಮನಾಥ್ ಅವರು ತಾವು ಕ್ಯಾನ್ಸರ್ ನೊಂದಿಗೆ ಹೋರಾಡುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ.

ತರ್ಮಾಕ್ ಮೀಡಿಯಾ ಹೌಸ್‌ಗೆ ನೀಡಿದ ಸಂದರ್ಶನದಲ್ಲಿ ಸೋಮನಾಥ್, “ಭಾರತದ ಆದಿತ್ಯ-ಎಲ್1 ಮಿಷನ್ ಬಾಹ್ಯಾಕಾಶಕ್ಕೆ ಉಡಾವಣೆಯಾದ ದಿನದಂದೇ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಸ್ಕ್ಯಾನಿಂಗ್​ನಲ್ಲಿ ಕ್ಯಾನ್ಸರ್​ ಪತ್ತೆಯಾಗಿದೆ “ಎಂದು ಅವರು ಖಚಿತಪಡಿಸಿದ್ದಾರೆ.

” ಚಂದ್ರಯಾನ-3 ಮಿಷನ್ ಉಡಾವಣೆ ಸಮಯದಲ್ಲಿ ಕೆಲವು ಆರೋಗ್ಯ ಸಮಸ್ಯೆಗಳಿದ್ದವು . ಆದರೆ, ಆ ಸಮಯದಲ್ಲಿ ನನಗೆ ಸ್ಪಷ್ಟವಾಗಿಲ್ಲ, ಅದರ ಬಗ್ಗೆ ನನಗೆ ಸ್ಪಷ್ಟ ತಿಳುವಳಿಕೆ ಇರಲಿಲ್ಲ. ರೋಗನಿರ್ಣಯವು ತನಗೆ ಮಾತ್ರವಲ್ಲದೆ ಈ ಸವಾಲಿನ ಅವಧಿಯಲ್ಲಿ ತಮ್ಮ ಕುಟುಂಬ ಮತ್ತು ಸಹೋದ್ಯೋಗಿಗಳಿಗೂ ಆಘಾತವನ್ನುಂಟು ಮಾಡಿತ್ತು” ಎಂದು ಹೇಳಿದ್ದಾರೆ.

Advertisement

“ಆ ಸಮಯದಲ್ಲಿ ಸಂಪೂರ್ಣ ಗುಣಪಡಿಸುವ ಬಗ್ಗೆ ನನಗೆ ಅನಿಶ್ಚಿತವಾಗಿತ್ತು, ನಾನು ಆದರೆ ಚಿಕಿತ್ಸೆಯ ಪ್ರಕ್ರಿಯೆಗೆ ಒಳಗಾಗಿದ್ದೆ. ಶಸ್ತ್ರಚಿಕಿತ್ಸೆಯ ನಂತರ ಕಿಮೊಥೆರಪಿ ಮಾಡಲಾಯಿತು. ಆಸ್ಪತ್ರೆಯಲ್ಲಿ ಕೇವಲ ನಾಲ್ಕು ದಿನಗಳನ್ನು ಕಳೆದ ನಂತರ, ಇಸ್ರೋದಲ್ಲಿ ತನ್ನ ಕರ್ತವ್ಯವನ್ನು ಪುನರಾರಂಭಿಸಿದೆ. ಐದನೇ ದಿನದಿಂದ ಯಾವುದೇ ನೋವು ಇಲ್ಲದೆ ಕೆಲಸ ಮಾಡಲಾರಂಭಿಸಿದೆ. ಈಗಲೂ ನಾನು ನಿಯಮಿತವಾಗಿ ತಪಾಸಣೆ ಮತ್ತು ಸ್ಕ್ಯಾನ್‌ಗೆ ಒಳಗಾಗುತ್ತೇನೆ. ಆದರೆ, ಈಗ ನಾನು ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ ಮತ್ತು ನನ್ನ ಕರ್ತವ್ಯವನ್ನು ಪುನರಾರಂಭಿಸಿದ್ದೇನೆ” ಎಂದು ಸೋಮನಾಥ್ ಹೇಳಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement