ಇಂದು ರಾತ್ರಿ ಅಥವಾ ನಾಳೆ  ಉಪಚುನಾವಣೆಗೆ  ಅಭ್ಯರ್ಥಿಗಳ ಘೋಷಣೆ : ಸಿಎಂ

 

ಚಿತ್ರದುರ್ಗ :  ಇಂದು ರಾತ್ರಿ ಅಥವಾ ನಾಳೆ  ಉಪಚುನಾವಣೆಗೆ  ಅಭ್ಯರ್ಥಿಗಳ ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಂಗಾಳ ಕೊಲ್ಲಿಯಲ್ಲಿ ವಾಯು ಭಾರ ಕುಸಿತ ಇರುವುದರಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ ಎಂದರು. ರಾಜ್ಯದಲ್ಲಿ ನಡೆಯಲಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಇಂದು ಅಥವಾ ನಾಳೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುವುದು ಹಾಗೂ ಮೂರು ಕ್ಷೇತ್ರಗಳಲ್ಲಿ ನೂರಕ್ಕೆ ನೂರರಷ್ಟು ಕ್ಷೇತ್ರ ಗೆಲ್ಲುವ ಭರವಸೆಯಿಂದ ಇದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಅಹಿಂದ ವರ್ಗದ ಹಣ ಲೂಟಿ ಎಂಬ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಒಂದು ಸಾವಿರ ಕೋಟಿ ಕೊಟ್ಟರೇ ಸಿಎಂ ಆಗುತ್ತಾರೆ ಎಂದು ಹೇಳಿದ್ಯಾರು. 1 ಸಾವಿರ ಕೋಟಿ ಅದ್ಯಾವ ದುಡ್ಡು ಹಾಗಾದ್ರೆ ಕಪ್ಪು ಹಣ ಇರಬೇಕಲ್ವಾ, ಬ್ಲಾಕ್ ಮನಿ. ಯತ್ನಾಳ್ ಹತ್ತು, ಐದು ಕೋಟಿ ಮಾತಾಡಲ್ಲ, ಬರೀ ಸಾವಿರ ಕೋಟಿ ಮಾತಾಡ್ತಾರೆ ಎಂದು ಯತ್ನಾಳ್ ಹೇಳಿಕೆ ತಿರುಗೇಟು ನೀಡಿದರು.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement