ಉಗ್ರರು ಪಾಕ್ ನಲ್ಲಿ ಅವಿತು ಕುಳಿತರೆ ನುಗ್ಗಿ ಹೊಡೆಯುತ್ತೇವೆ – ರಾಜನಾಥ್ ಸಿಂಗ್

ಬೆಂಗಳೂರು: ಭಾರತೀಯರ ಶಾಂತಿ ಕದಡಲು ಯತ್ನಿಸಿದರೆ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಿದರೆ, ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

2019ರ ನಂತರ ಭಾರತೀಯ ಗುಪ್ತಚರ ಸಂಸ್ಥೆಗಳು ಪಾಕಿಸ್ತಾನದಲ್ಲಿ ಭಯೋತ್ಪಾದಕರ ಹತ್ಯೆ ನಡೆಸಿವೆ ಎಂಬ ಬ್ರಿಟಿಷ್ ಪತ್ರಿಕೆಯೊಂದರ ವರದಿಗೆ ಪ್ರತಿಕ್ರಿಯಿಸಿದ ರಕ್ಷಣಾ ಸಚಿವರು, “ನೆರೆಯ ದೇಶದ ಭಯೋತ್ಪಾದಕರು ಭಾರತದಲ್ಲಿ ಶಾಂತಿ ಕದಡಲು ಪ್ರಯತ್ನಿಸಿದರೆ ಅಥವಾ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಪ್ರಯತ್ನಿಸಿದರೆ ನಾವು ಅವರಿಗೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ” ಎಂದು ಹೇಳಿದ್ದಾರೆ.

ಉಗ್ರರು ಪಾಕಿಸ್ತಾನದಲ್ಲಿ ಅವಿತುಕೊಂಡರೆ, ಅವರನ್ನು ಕೊಲ್ಲಲು ನಾವು ಪಾಕಿಸ್ತಾನಕ್ಕೆ ಪ್ರವೇಶಿಸಲು ಹೆದರುವುದಿಲ್ಲ .ಕಠಿಣ ಕ್ರಮ ಕೈಗೊಳ್ಳುವ ಶಕ್ತಿ ಭಾರತಕ್ಕಿದೆ ಮತ್ತು ಪಾಕಿಸ್ತಾನ ಅದನ್ನು ಅರಿತುಕೊಳ್ಳಲು ಆರಂಭಿಸಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement