ಎಸ್.ರಾಜುಗೆ ಡಾಕ್ಟರೇಟ್ ಡಾಕ್ಟರೇಟ್ ಪದವಿ

ದಾವಣಗೆರೆ: ತಾಲೂಕಿನ ಬಿ.ಚಿತ್ತಾನಹಳ್ಳಿ ಗ್ರಾಮದ ಎಸ್.ರಾಜು ಅವರಿಗೆ ಕುವೆಂಪು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಕುವೆಂಪು ವಿಶ್ವವಿದ್ಯಾಲಯದ ಸಮಾಜಶಾಸ್ತç ವಿಭಾಗದ ಪ್ರಾಧ್ಯಾಪಕ ಡಾ.ಇ.ಚಂದ್ರಶೇಖರ್ ಮಾರ್ಗದರ್ಶನದಲ್ಲಿ ಸಮಾಜಶಾಸ್ತç ವಿಭಾಗದಲ್ಲಿ ‘ಉನ್ನತ ಶಿಕ್ಷಣದಲ್ಲಿ ಗ್ರಾಮೀಣ ಯುವಜನತೆಯ ಸಮಸ್ಯೆಗಳು; ಸಮಾಜಶಾಸ್ತಿçÃಯ ಅಧ್ಯಯನ’ ವಿಷಯ ಕುರಿತು ಮಹಾಪ್ರಬಂಧ ಮಂಡಿಸಿದ್ದರು. ಎಸ್.ರಾಜು ದೇವರಬೆಳೆಕೆರೆ ಶಿವಾನಂದಪ್ಪ ಮತ್ತು ರತ್ನಮ್ಮ ದಂಪತಿಯ ಪುತ್ರನಾಗಿದ್ದಾರೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಸವರಾಜ ತಹಸೀಲ್ದಾರ್, ಪತ್ನಿ ಹಾಗೂ ಪ್ರಾಧ್ಯಾಪಕಿ ಡಾ.ಎಸ್.ಯಶೋಧ, ಪುತ್ರರಾದ ಆರ್.ಸಮಥ್, ಆರ್.ಶರತ್, ಸಹೋದರ ಡಾ.ಗಿರಿಧರ್ ಅಭಿನಂದನೆ ಸಲ್ಲಿಸಿದ್ದಾರೆ.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement