ಏ. 9ರಂದು ಕಾಳಿಕಾದೇವಿ ವಿಶ್ವಕರ್ಮ ದೇವಸ್ಥಾನದಲ್ಲಿ ರಥೋತ್ಸವ

 

ದಾವಣಗೆರೆ : ಕಾಳಿಕಾದೇವಿ ರಸ್ತೆಯಲ್ಲಿರುವ ಶ್ರೀ ಕಾಳಿಕಾದೇವಿ ವಿಶ್ವಕರ್ಮ ದೇವಸ್ಥಾನದಲ್ಲಿ ದಿನಾಂಕ 08-04-2024ರ ಸೋಮವಾರ ಯುಗಾದಿ ಅಮಾವಾಸ್ಯೆ ದಿನದಂದು ಬೆಳಿಗ್ಗೆ ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ ಮತ್ತು ಗೋಧಿ ಉಡಿ ತುಂಬುವುದು, ನಂತರ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗವಿರುತ್ತದೆ.

ದಿನಾಂಕ 09-04-2024ರ ಮಂಗಳವಾರ ಯುಗಾದಿ ಪಾಡ್ಯದಂದು ಬೆಳಿಗ್ಗೆ ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ಮಂಗಳಾರತಿ, ಸಂಜೆ 6-30ಕ್ಕೆ ಚಾಂದ್ರಮಾನ ಯುಗಾದಿ ಪ್ರಯುಕ್ತ ಶ್ರೀ ಕಾಳಿಕಾದೇವಿ ರಥೋತ್ಸವವನ್ನು ದೇವಸ್ಥಾನದಿಂದ ರಾಜಬೀದಿಗಳಲ್ಲಿ ನೆರವೇರಿಸಲಾಗುವುದು.

Advertisement

ರಥೋತ್ಸವವು ದೇವಸ್ಥಾನಕ್ಕೆ ಬಂದ ನಂತರ ಮಹಾಮಂಗಳಾರತಿ, ಬೇವು-ಬೆಲ್ಲದ ಪ್ರಸಾದವನ್ನು ವಿತರಿಸಲಾಗುವುದು ಎಂದು ಶ್ರೀ ಕಾಳಿಕಾದೇವಿ ವಿಶ್ವಕರ್ಮ ದೇವಸ್ಥಾನ ಆಡಳಿತ ಸಮಿತಿ ಟ್ರಸ್ಟ್‌ ತಿಳಿಸಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement