‘ಕಾನೂನು ಸುವ್ಯವಸ್ಥೆ ಉತ್ತಮಪಡಿಸಲು ರಾಜ್ಯದೆಲ್ಲೆಡೆ ಕ್ರಮ’ – ಜಿ ಪರಮೇಶ್ವರ್

ಬೆಂಗಳೂರು: ರಾಜ್ಯದೆಲ್ಲೆಡೆ ಕಾನೂನು ಸುವ್ಯವಸ್ಥೆ ಉತ್ತಮಪಡಿಸಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.

ನೈತಿಕ ಪೊಲೀಸ್ ಗಿರಿ ಬಗ್ಗೆ ವಿಶೇಷವಾಗಿ ಮಾತನಾಡಿದ ಅವರು ಮಂಗಳೂರು, ಉಡುಪಿ ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಪ್ರಕಣಗಳು ಜಾಸ್ತಿ ವರದಿಯಾಗುತ್ತಿದ್ದು, ಮೋರಲ್ ಪೊಲೀಸಿಂಗ್ ನಲ್ಲಿ ಭಾಗಿಯಾಗುವವರನ್ನು ಹದ್ದು ಬಸ್ತಿನಲ್ಲಿಡಲು ಮಂಗಳೂರಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪಿಸಲಾಗಿದೆ, ಈ ಪಡೆಯು, ತಾವೇ ಕಾನೂನಿನ ಪರಿಪಾಲಕರು ಅಂತ ಪೋಸು ಬಿಗಿದು ಜನರಿಗೆ ತೊಂದರೆ ಕೊಡುವವರನ್ನು-ಅವರು ಯಾವುದೇ ಸಮುದಾಯದವರಾಗಿರಲಿ-ಹಿಡಿದು ಕ್ರಮ ತೆಗೆದುಕೊಳ್ಳುತ್ತದೆ ಎಂದರು.

ಇನ್ನು ಮಂಗಳೂರಲ್ಲಿ ಪರಿಸ್ಥಿತಿ ಹದಗೆಟ್ಟಿದ್ದು, ಗೃಹ ಇಲಾಖೆ ಈ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ ಎಂದು ತಿಳಿಸಿದ್ದಾರೆ.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement