ಟಿಎಪಿಸಿಎಂಎಸ್ ನಿರ್ದೇಶಕರ ಸ್ಥಾನಗಳಿಗೆ ಅವಿರೋಧ ಆಯ್ಕೆ

WhatsApp
Telegram
Facebook
Twitter
LinkedIn

 

ಚಿತ್ರದುರ್ಗ : ಚಿತ್ರದುರ್ಗ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟದ ಸಹಕಾರ ಸಂಘ (ಟಿಎಪಿಸಿಎಂಎಸ್) ಸಂಘದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಲಿ ನಿರ್ದೇಶಕರ ಸ್ಥಾನಗಳಿಗೆ ‘ಬಿ’ ತರಗತಿ ರೈತ ಸದಸ್ಯರಿಂದ 8 ಮಂದಿ ನಿರ್ದೇಶಕರು ಹಾಗೂ ‘ಎ’ ತರಗತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ 5 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

‘ಬಿ’ ತರಗತಿ ರೈತ ಸದಸ್ಯರಿಂದ ಕೋಗುಂಡೆ ಹೆಚ್.ಎಂ.ಮಂಜುನಾಥಪ್ಪ, ಯಳಗೋಡು ಜಿ.ಆರ್.ಧನಂಜಯ, ಭರಮಸಾಗರ ಎನ್.ಕಲ್ಲೇಶ್, ಅನ್ನೇಹಾಳ್ ಹೆಚ್.ನಿರಂಜನಮೂರ್ತಿ, ಸಿರಿಗೆರೆ ಕೆ.ಜಿ.ಕವಿತ ಬಸವಕುಮಾರ್, ಚಿಕ್ಕಬೆನ್ನೂರು ಬಿ.ಎಸ್.ಶಾಂತಕುಮಾರಿ, ಸಿರಿಗೆರೆ ಎಸ್.ಹೆಚ್.ತಿಪ್ಪೇಸ್ವಾಮಿ, ವಡ್ಡರಸಿದ್ದವ್ವನಹಳ್ಳಿ ಟಿ.ಸಣ್ಣ ತಿಮ್ಮಪ್ಪ ಆಯ್ಕೆಯಾಗಿದ್ದಾರೆ.

‘ಎ’ ತರಗತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಕೋಡಿರಂಗವ್ವನಹಳ್ಳಿ ಹೆಚ್.ಎನ್.ಹನುಮಂತಪ್ಪ, ಸಿಂಗಾಪುರ ಕೆ.ಆರ್.ರವಿ, ಸಿರಿಗೆರೆ ಎಂ.ಎಸ್.ಪ್ರಸನ್ನ, ಕೊಡಗವಳ್ಳಿಯ ಬಿ.ಎನ್.ದೇವರಾಜ್, ಹಿರೇಕಬ್ಬಿಗೆರೆ ಜಿ.ಎಸ್.ನಾಗರಾಜ್ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಮಹಮ್ಮದ್ ಯೂನಸ್ ಫರ್ವಿಜ್ ಘೋಷಿಸಿದ್ದಾರೆ ಎಂದು ಚಿತ್ರದುರ್ಗ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟದ ಸಹಕಾರ ಸಂಘದ ಕಾರ್ಯದರ್ಶಿ ಜಿ.ಎನ್.ಉಮಾಶಂಕರ್ ತಿಳಿಸಿದ್ದಾರೆ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon