ತಂದೆಯ ಜೊತೆ ಬೈಕ್ ನಲ್ಲಿ ತೆರಳುವ ವೇಳೆ ಗಾಳಿಪಟ ದಾರ ಸಿಲುಕಿ 7 ವರ್ಷದ ಬಾಲಕ ಸಾವು

ಮಧ್ಯಪ್ರದೇಶ: ತಂದೆಯ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಏಳು ವರ್ಷದ ಬಾಲಕನ ಕತ್ತಿಗೆ ಗಾಳಿಪಟದ ದಾರ ಸಿಲುಕಿ ಸಾವನ್ನಪ್ಪಿದ ಘಟನೆ ಧಾರ್ ನಗರದಲ್ಲಿ ಭಾನುವಾರ ನಡೆದಿದೆ.

ನಗರದ ಹತ್ವಾರಾ ಚೌ ಕ್ನಲ್ಲಿ ವಿನೋದ್ ಚೌಹಾಣ್ ಎಂಬಾತ ತನ್ನ ಏಳು ವರ್ಷದ ಮಗನೊಂದಿಗೆ ಬೈಕ್ನಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಚೌಹಾಣ್ ಅವರು ತನ್ನ ಮಗನನ್ನು ಬೈಕ್ ನಲ್ಲಿ ಎದುರು ಭಾಗದಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ ವೇಳೆ ಗಾಳಿಪಟದ ದಾರ ಬಾಲಕನ ಕತ್ತು ಸೀಳಿದೆ ಪರಿಣಾಮ ಗಂಭೀರ ಸ್ಥಿತಿಯಲ್ಲಿದ್ದ ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ  ಬಾಲಕ ಮೃತಪಟ್ಟಿದ್ದನೆ ಎಂದು ವೈದ್ಯರು ತಿಳಿಸಿದ್ದಾರೆ.

Advertisement

ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಗಾಳಿಪಟ ಹರಿಸುವುದು ವಾಡಿಕೆ ಹಾಗಾಗಿ ಗಾಳಿಪಟ ಹರಿಸಲಾಗಿತ್ತು .ಆದರೆ ಗಾಳಿಪಟಕ್ಕೆ ಅಳವಡಿಸಿದ ದಾರ ಗಟ್ಟಿಯಾಗಿರುವುದರಿಂದ ತುಂಡರಿಸಲು ಸಾಧ್ಯವಿಲ್ಲ .ಹಾಗಾಗಿ ಬಾಲಕನ ಕತ್ತು ಸೀಳಿಕೊಂಡು ಹೋಗಿದೆ ಎನ್ನಲಾಗಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement