ನವಿಲು ಗರಿ ಹಾಕಿಕೊಂಡಿದ್ದಾರೆಂದು ಮೋದಿಯವರನ್ನು ಅರೆಸ್ಟ್ ಮಾಡೋಕೆ ಆಗುತ್ತಾ..? ಬಿ.ಕೆ ಹರಿಪ್ರಸಾದ್ ಪ್ರಶ್ನೆ

ಚಿತ್ರದುರ್ಗ: ಕೆಲವರ ಮನೆಯಲ್ಲಿ ಆನೆ ದಂತದಿಂದ ಮೇಜು, ಕುರ್ಚಿ ಮಾಡಿಸಿಕೊಂಡಿದ್ದಾರೆ. ಅವರನೆಲ್ಲ ಅರೆಸ್ಟ್ ಮಾಡಿ ಅಂತಹ ಪೀಠೋಪಕರಣಗಳನ್ನು ಸೀಜ್ ಮಾಡ್ಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಹೇಳಿದರು. ಚಿತ್ರದುರ್ಗ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹುಲಿ ಉಗುರು ಧರಿಸಿದ ಯಾರೇ ಆಗಿರಲಿ, ಎಷ್ಟೇ ಪ್ರಭಾವಿ ಆಗಿರಲಿ, ಅಂಥವರ ಮೇಲೆ ಕ್ರಮ ಆಗುತ್ತದೆ. ವನ್ಯಜೀವಿಗಳ ಕೂದಲು, ಹಲ್ಲು, ಚರ್ಮ ಇದೆಲ್ಲವನ್ನು ಇಟ್ಟುಕೊಳ್ಳುವವರ ಮೇಲೂ ಕ್ರಮ ಆಗುತ್ತದೆ ಎಂದು ಹರಿಪ್ರಸಾದ್ ಹೇಳಿದರು. ಇನ್ನು ಮಸೀದಿಗಳಲ್ಲಿ ನವಿಲುಗರಿ ಉಪಯೋಗಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಹರಿಪ್ರಸಾದ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ನವಿಲು ಸಾಕಿದ್ದರು‌. ನವಿಲು ಗರಿ ಧರಿಸಿ ಕೆಲವೊಮ್ಮೆ ಕಾಣಿಸಿಕೊಂಡಿದ್ದಾರೆ. ಗರಿ ತೆಗೆಯೋಕೂ ಪ್ರಾಣ ತೆಗೆಯೋಕೂ ವ್ಯತ್ಯಾಸ ಇದೆ. ಗರಿ ಹಾಕಿಕೊಂಡಿದ್ದರು ಎಂಬ ಕಾರಣಕ್ಕೆ ಮೋದಿ ಅವರನ್ನು ಅರೆಸ್ಟ್ ಮಾಡೋಕೆ ಆಗುತ್ತಾ? ಎಂದು ಪ್ರಶ್ನಿಸಿದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement