ನಾಳೆ ಜ.21ರಂದು ಈ ವಾರ್ಡ್ ಗಳಲ್ಲಿ ಕರೆಂಟ್ ಇರಲ್ಲ.!

 

ಚಿತ್ರದುರ್ಗ: ಚಿತ್ರದುರ್ಗ ನಗರ ಉಪವಿಭಾಗ ಘಟಕ-1 ಮತ್ತು ಘಟಕ-3ರ ವ್ಯಾಪ್ತಿಯಲ್ಲಿ ಬರುವ ಕೋಟೆ, ಜಿಲ್ಲಾ ಪಂಚಾಯತ್, ಕಾಪರ್ ಮೈನ್ಸ್, 11 ಕೆ.ವಿ ಮಾರ್ಗಗಳ ತುರ್ತು ನಿರ್ವಹಣಾ ಕೆಲಸಗಳನ್ನು ನಿರ್ವಹಿಸಲು ಇದೇ ಜ.21ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. 

ವಿದ್ಯುತ್ ನಿಲುಗಡೆಗೊಳಪಡುವ ಪ್ರದೇಶಗಳು: ಕೋಟೆ-ಇಂಡಸ್ಟ್ರೀಯಲ್ ಏರಿಯಾ, ಗಾಂಧಿ ನಗರ, ಐಯುಡಿಪಿ ಲೇಔಟ್, ವಿಜ್ಞಾನ ಕಾಲೇಜ್, ಬುದ್ಧ ನಗರ, ಜೋಗಿಮಟ್ಟಿ ರಸ್ತೆ, ಎಸ್.ವಿ.ನಗರ, ಟೀಚರ್ಸ್ ಕಾಲೋನಿ, ಸೂರ್ಯಪುತ್ರ ಸರ್ಕಲ್, ಕಣುಮಪ್ಪ ಲೇಔಟ್, ಜೆ.ಪಿ.ನಗರ ಹಾಗೂ ಸುತ್ತಮುತ್ತಲಿನ ಪ್ರದೇಶ. ಜಿಲ್ಲಾ ಪಂಚಾಯತ್-ಐಯುಡಿಪಿ ಲೇಔಟ್, ಸರಸ್ವತಿ ಪುರಂ, ಕೆ.ಕೆ.ಸರ್ಕಲ್, ಕಾಮನಬಾವಿ ಬಡಾವಣೆ, ಕೋಟೆ ರಸ್ತೆ, ಸರ್ಕಾರಿ ಡಿಪ್ಲೊಮಾ ಕಾಲೇಜ್, ಮಹಾರಾಣಿ ಕಾಲೇಜ್, ದೊಡ್ಡಪೇಟೆ, ದೊಡ್ಡಗರಡಿ ಹಾಗೂ ಸುತ್ತಮುತ್ತಲಿನ ಪ್ರದೇಶ. ಕಾಪರ್ ಮೈನ್ಸ್-ಕುಂಚಿಗನಾಳ್, ಇಂಗಳದಾಳ್, ಕುರುಮರಡಿಕೆರೆ, ಕೆನ್ನೆಡೆಲ, ಕ್ಯಾದಿಗೆರೆ, ಡಿ.ಎಸ್.ಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

Advertisement

ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಚಿತ್ರದುರ್ಗ ನಗರ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement