ಬಿಜೆಪಿ ಹೆಸರು ಬದಲಾಯಿಸೋಕೆ, ಪ್ರತಿಮೆ ಮಾಡಲಷ್ಟೇ ಲಾಯಕ್: ರಾಮಲಿಂಗಾರೆಡ್ಡಿ

ಬೆಂಗಳೂರು:ಬಿಜೆಪಿಯವರು ಹೆಸರು ಬದಲಾಯಿಸೋಕೆ, ಪ್ರತಿಮೆ ಮಾಡಿಲು ಲಾಯಕ್ ಎಂದು ಸಚಿವ ರಾಮಲಿಂಗಾರೆಡ್ಡಿ ಕಿಡಿಕಾರಿದ್ದಾರೆ.

ಕೆ.ಆರ್​.ಪುರ-ಬೈಯಪ್ಪನಹಳ್ಳಿ ಮೆಟ್ರೋ ಮಾರ್ಗಕ್ಕೆ ಚಾಲನೆ ವಿಚಾರಕ್ಕೆ ಸಂಬಂಧಿಸಿ ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ ಅವರು ಮೆಟ್ರೋ ಪ್ರಾರಂಭ ಮಾಡಿದ್ದು ಮನಮೋಹನ್ ಸಿಂಗ್ ಸರ್ಕಾರ. ಇದರಲ್ಲಿ ಎನ್​ಡಿಎ ಹಾಗೂ ಭಾರತೀಯ ಜನತಾ ಪಕ್ಷದ ಪಾತ್ರ ಏನೂ ಇಲ್ಲ . ಆಗಲೂ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು ಧರ್ಮ ಸಿಂಗ್ ಮುಖ್ಯಮಂತ್ರಿಗಳಾಗಿದ್ದರು ಎಂದು ಹೇಳಿದ್ದಾರೆ.

ಬಿಜೆಪಿಗೆ ಈಗ ಮಾಡಲು ಕೆಲಸ ಇಲ್ಲ, ಅಪಪ್ರಚಾರ ಮಾಡೋದು ಅವರ ಕೆಲಸ. ಅಧಿಕಾರದಲ್ಲಿದ್ದಾಗಲೂ ಅಭಿವೃದ್ದಿ ಕೆಲಸಗಳೇ ಮಾಡಲ್ಲ. ಈಗ ಹೇಳಿಕೆ ನೀಡಿ ತಮ್ಮ ಬೇಳೆ ಕಾಳು ಬೇಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಅಧಿಕಾರದಲ್ಲಿ ಇಲ್ಲದಾಗ ಇದೇ ರೀರಿ ಕಿತಾಪತಿ ಮಾಡೋದು ಬಿಜೆಪಿ ಕೆಲಸ. ಜಗಳ, ಕೋಮು ಗಲಭೆ , ಕಾಂಗ್ರೆಸ್ ವಿರುದ್ದ ಅಪಪ್ರಚಾರ ಮಾಡೋದು, ಪೊಲೀಸ್ ನೈತಿಕ ಗಿರಿ ಮಾಡೋದು, ಬಿಜೆಪಿ ಕಾರ್ಯಕರ್ತರು ವೇಷ ಬದಲಾಯಿಸಿಕೊಂಡು ಹೆಸರು ಬದಲಾಯಿಸಿಕೊಂಡು ಕಿಡಿಗೇಡಿತನ ಮಾಡೋದು ಅವರ ಹುಟ್ಟುಗುಣವಾಗಿದೆ ಎಂದು ಆರೋಪಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement