ಮರೆತೂ ಕೂಡ ಈ ಸಮಯದಲ್ಲಿ ಮನೆ ಕಸ ಗುಡಿಸಬೇಡಿ – ಪೊರಕೆಗೆ ಕಾಲಿನಿಂದ ತುಳಿಯೋದ್ರಿಂದ ಬರುತ್ತೆ ಈ ಸಮಸ್ಯೆ..!!

ವಾಸ್ತು ಶಾಸ್ತ್ರದ ಕಸಗೂಡಿಸಲು ಕೂಡ ಸರಿಯಾದ ಮತ್ತು ತಪ್ಪಾದ ಸಮಯಗಳಿವೆ. ಸರಿಯಾದ ಸಮಯಕ್ಕೆ ಕಸವನ್ನು ಗೂಡಿಸಿದರೆ, ದೇವಿ ಲಕ್ಷ್ಮಿ ಮನೆಯಲ್ಲಿ ನೆಲೆಸುತ್ತಾಳೆ. ಸುಖ, ಸಂತೋಷ ಮತ್ತು ಸಮೃದ್ಧಿ ಮನೆಯಲ್ಲಿ ಹರಿದು ಬರುತ್ತದೆ. ಹಲವು ಬಾರಿ ಜನರು ದೀರ್ಘ ಕಾಲದ ನಂತರ ತಮ್ಮ ಮನೆಗೆ ಹಿಂದಿರುಗುತ್ತಾರೆ ಮತ್ತು ಧೂಳಿನಿಂದ ಕೂಡಿದ ಮನೆಯನ್ನು ನೋಡಿದ ತಕ್ಷಣ ಅವರು ಅದನ್ನು ಸ್ವಚ್ಛಗೊಳಿಸಲು ಪೊರಕೆಯನ್ನು ಕೈಗೆತ್ತಿಕೊಳ್ಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಅವರು ತಮಗೆ ಹಾನಿ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಸೂರ್ಯಾಸ್ತದ ನಂತರವೂ ಮನೆಯಲ್ಲಿ ಕಸಗುಡಿಸಬೇಡಿ.

ಮನೆಯ ಕಸ ಗುಡಿಸಲು ಯಾವ ಸಮಯ‌ ಸೂಕ್ತ

ಸೂರ್ಯೋದಯದ ನಂತರದ ಸಮಯವನ್ನು ಮನೆಯ ಸ್ವಚ್ಛತೆಗೆ ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಧರ್ಮಶಾಸ್ತ್ರಗಳಲ್ಲಿ ಪೊರಕೆಗೆ ಲಕ್ಷ್ಮಿ ದೇವಿಯ ರೂಪವೆಂದು ಹೇಳಲಾಗಿದೆ. ಮುಂಜಾನೆ ಸೂರ್ಯೋದಯದ ನಂತರವೇ ಮನೆಯನ್ನು ಸ್ವಚ್ಛಗೊಳಿಸಬೇಕು ಎಂಬ ಧಾರ್ಮಿಕ ನಂಬಿಕೆ ಇದೆ. ಸೂರ್ಯಾಸ್ತದ ನಂತರ ಮನೆಯಲ್ಲಿ ಕಸವನ್ನು ಗುಡಿಸಬೇಡಿ. ಅತ್ಯಾವಶ್ಯಕ ಎನಿಸಿದರೆ ಕಸವನ್ನು ಗುಡಿಸಿ ಆ ಕಸವನ್ನು ಯಾವುದಾದರೊಂದು ಮೂಲೆಯಲ್ಲಿ ಸಂಗ್ರಹಿಸಿ. ಆದರೆ ಆ ಮಣ್ಣು ಮತ್ತು ಕಸವನ್ನು ಮನೆಯಿಂದ ಹೊರಗೆ ಎಸೆಯಬೇಡಿ.

ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿ ಮುನಿಸಿಕೊಂಡು ಮನೆ ತೊರೆಯುತ್ತಾಳೆ. ಮನೆಯಲ್ಲಿ ದಾರಿದ್ರ್ಯ ಬರುತ್ತದೆ ಮತ್ತು ವ್ಯಕ್ತಿಯು ಕ್ರಮೇಣ ಬಡವನಾಗುತ್ತಾನೆ. ಆದ್ದರಿಂದ, ಮನೆಯನ್ನು ಸ್ವಚ್ಛಗೊಳಿಸುವಾಗ, ಈ ವಾಸ್ತು ನಿಯಮವನ್ನು ನೆನಪಿನಲ್ಲಿಡಿ.

Advertisement

ಇನ್ನು ಯಾವ ದಿನದಂದು ಹೊಸ ಪೊರಕೆಯನ್ನು ಮನೆಗೆ ತರಬೇಕು ಎಂಬುದನ್ನು ಸಹ ನೀವು ನೆನಪಿನಲ್ಲಿಡಬೇಕು. ಹಳೆಯ ಪೊರಕೆಯನ್ನು ಕಸಕ್ಕೆ ಎಸೆಯಬೇಡಿ. ಬದಲಿಗೆ, ಶುಭದಿನವನ್ನು ನೋಡಿ, ಅದನ್ನು ದೇವಸ್ಥಾನಕ್ಕೆ ದಾನ ಮಾಡಿ ಅಥವಾ ಬೇರೆ ಯಾವುದೇ ವ್ಯಕ್ತಿಗೆ ದಾನ ಮಾಡಿ. ಪೊರಕೆಗೆ ಅಗೌರವ ತೋರಿದರೆ ತಾಯಿ ಲಕ್ಷ್ಮಿ ಮುನಿಸಿಕೊಳ್ಳುತ್ತಾಳೆ. ಇದರ ಹೊರತಾಗಿ, ಪೊರಕೆಯನ್ನು ತಪ್ಪಾಗಿ ಅಂದರೆ, ಉದಾಹರಣೆಗೆ ಕಾಲಿನಿಂದ ಸ್ಪರ್ಶಿಸಬೇಡಿ. ಇದೂ ಕೂಡ ದೇವಿ ಲಕ್ಷ್ಮಿಯ ಪ್ರಕೋಪಕ್ಕೆ ಕಾರಣವಾಗುತ್ತದೆ.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement