ದೊಡ್ಮನೆಯಲ್ಲಿ ಡಿವೋರ್ಸ್ ಗಾಳಿ ಬಿರುಗಾಳಿಯಂತೆ ಎಲ್ಲೆಡೆ ಹಬ್ಬಿತ್ತು. ಯುವ ಹಾಗೂ ಶ್ರೀದೇವಿ ಬಾಳಲ್ಲಿ ಉಂಟಾದ ಬಿರುಕಿಗೆ ಅಕ್ರಮ ಸಂಬಂಧದ ಬಣ್ಣ ಬಳಿಯಲಾಗಿತ್ತು. ಇದೀಗ ತನ್ನ ವಿರುದ್ಧದ ಆರೋಪಕ್ಕೆ ನಟಿ ಸಪ್ತಮಿ ಗೌಡ ರೊಚ್ಚಿಗೆದ್ದಿದ್ದಾರೆ. ಯುವ ಪತ್ನಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಯುವ ರಾಜ್ಕುಮಾರ್ ತನ್ನ ಪತ್ನಿ ವಿರುದ್ಧ ಲೀಗಲ್ ನೋಟಿಸ್ ಕೊಟ್ಟಿದ್ದಕ್ಕೆ ಪತ್ನಿ ಶ್ರೀದೇವಿ ಬೈರಪ್ಪ ರಿಪ್ಲೈ ನೋಟೀಸ್ ನೀಡಿದ್ದರು.ಈ ನೋಟಿಸ್ನಲ್ಲಿ ನಟಿ ಸಪ್ತಮಿ ಗೌಡ ಅವ್ರ ಬಗೆಗಿನ ಸಂಬಂಧದ ಬಗ್ಗೆ ಉಲ್ಲೇಖವೂ ಆಗಿತ್ತು. ಇದೀಗ ಈ ಎಲ್ಲಾ ಆರೋಪಗಳಿಗೂ ಖುದ್ದು, ನಟಿ ಸಪ್ತಮಿ ಗೌಡ ಕಾನೂನಿನ ಚಾಟಿ ಬೀಸಿದ್ದಾರೆ. ಹೌದು, ಯುವ ಪತ್ನಿ ಶ್ರೀದೇವಿ ಮಾಡಿದ್ದ ಆರೋಪಕ್ಕೆ ನಟಿ ಸಪ್ತಮಿ ಗೌಡ ನ್ಯಾಯಾಲಯದ ಮೊರೆ ಹೋಗಿದ್ದಾರೆ. ತನ್ನ ವಿರುದ್ಧ ಅಪಪ್ರಚಾರ ಮಾಡದಂತೆ ಸಿಟಿ ಸಿವಿಲ್ ಕೋರ್ಟ್ ಮೊರೆ ಹೋಗಿದ್ದು, ಸಪ್ತಮಿ ಗೌಡ ಪರ ಇಂದು ಕೋರ್ಟ್ನಲ್ಲಿ ಹಿರಿಯ ವಕೀಲ ಶಂಕರಪ್ಪ ವೆಂಕಟರಾಯಪ್ಪ ಅವರು ಈ ಸಂಬಂಧ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
