ದಾವಣಗೆರೆ: ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ರಹಿಮಾನ್ ಸಾಬ್ .ಎಲ್., ಇವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಪಿಎಚ್ ಡಿ ಪದವಿ ನೀಡಿದೆ.
ಇವರು ಪ್ರೊ. ಎಂ ಶಶಿಧರ್, ಮುಖ್ಯಸ್ಥರು, ಇತಿಹಾಸ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಇವರ ಮಾರ್ಗದರ್ಶನದಲ್ಲಿ , ʼಪ್ರಾಚೀನ ಭಾರತದಲ್ಲಿ ಸಾಮಾಜಿಕ ಜೀವನ (ಸಾಮಾನ್ಯ ಶಕವರ್ಷ ೩ರಿಂದ ೬ನೇ ಶತಮಾನ) ಎನ್ನುವ ವಿಷಯದ ಕುರಿತು ಮಹಾಪ್ರಬಂಧವನ್ನು ಮಂಡಿಸಿದ್ದರು.
ರಹಿಮಾನ್ ಸಾಬ್. ಎಲ್. ರವರು ಶ್ರೀ ಲಾಲಾಸಾಹೇಬ್ ಹಾಗೂ ಶೇಖ್ ಚಿನ್ನಾಬೀಬಿ ದಂಪತಿಗಳ ಪುತ್ರನಾಗಿದ್ದಾರೆ. ಇವರಿಗೆ ಕಾಲಿನ ಪ್ರಾಂಶುಪಾಲರು ಹಾಗು ಎಲ್ಲಾ ಸಹದ್ಯೋಗಿ ಮಿತ್ರರು ಅಭಿನಂದನೆ ತಿಳಿಸಿರುತ್ತಾರೆ.