ರಾಜ್ಯದಲ್ಲಿ ಎರಡು ದಿನ ಉಷ್ಣ ಅಲೆ ಘೋಷಣೆ

ಕಲಬುರಗಿ, ಬಾಗಲಕೋಟೆ, ಬಳ್ಳಾರಿ, ವಿಜಯನಗರ, ಬೀದರ್‌, ಕೊಪ್ಪಳ ಸೇರಿ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಉಷ್ಣ ಅಲೆಯ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 40 ಡಿ.ಸೆ. ಏರಿಕೆಯಾಗಿರುವ ಹಿನ್ನಲೆ ಮುಂದಿನ 2 ದಿನ ಬಿಸಿ ಗಾಳಿಯ ತೀವ್ರತೆ ಕಂಡುಬರುವ ಮುನ್ಸೂಚನೆಯಿದೆ.
ಮುಂದಿನ 5 ದಿನ ಒಳನಾಡಿನ ಒಂದೆರಡು ಕಡೆ ಗರಿಷ್ಠ ತಾಪಮಾನ 2-3 ಡಿ.ಸೆ. ಹೆಚ್ಚಾಗುವ ಸಾಧ್ಯತೆಯಿದೆ.
ಆರೋಗ್ಯದ ದೃಷ್ಟಿಯಿಂದ ಜನರು ಬಿಸಿಲಿನ ತೀವ್ರತೆ ಬಗ್ಗೆ ಮುಂಜಾಗ್ರತೆ ವಹಿಸುವಂತೆ ಆರೋಗ್ಯ ಇಲಾಖೆ ಕೂಡ ತಿಳಿಸಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement