ರಾಜ್ಯಪಾಲರ ಆದೇಶಕ್ಕೆ ಯಾವುದೇ ತಡೆ ನೀಡಲ್ಲ’ : ಆಗಸ್ಟ್ 29ರಂದು ವಿಚಾರಣೆ ಮುಂಡೂಡಿದ ಹೈಕೋರ್ಟ್‌

ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿರುವ ಕುರಿತಾಗಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಮುಂದೂಡಿದೆ..ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಇಂದು ವಿಚಾರಣೆ ನಡೆಸಿತು. ಸಿಎಂ ಸಿದ್ದು ಪರ ಅಭಿಷೇಕ್ ಸಿಂಘ್ವಿ ವಾದ ಮಂಡಿಸಿದರು.. ವಾದ ಪ್ರತಿವಾದದ ಬಳಿಕ “ರಾಜ್ಯಪಾಲರ ಆದೇಶಕ್ಕೆ ಯಾವುದೇ ತಡೆ ನೀಡಬಾರದು” ಎಂಬ ತುಷಾರ್ ಮೆಹ್ತಾ ಮನವಿ ಸಲ್ಲಿದ್ದರು.. ರಾಜ್ಯಪಾಲರ ಆದೇಶಕ್ಕೆ ಯಾವುದೇ ತಡೆ ನೀಡಿಲ್ಲ ಎಂದ ಏಕಸದಸ್ಯ ನ್ಯಾಯಪೀಠ, ಆಗಸ್ಟ್ 29 ಮಧ್ಯಾಹ್ನ 2.30 ರಂದು ವಿಚಾರಣೆ ಮುಂಡೂಡಿದೆ.. ಅಲ್ಲದೇ ನಾಳೆಯಂದೂ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲೂ ವಿಚಾರಣೆಗೆ ಬ್ರೇಕ್ ಹಾಕಲಾಗಿದ್ದು, ಇದರಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಸದ್ಯ ರಿಲೀಫ್‌ ಸಿಕ್ಕದಂತಾಗಿದೆ..

 

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement