‘ರಾಮಮಂದಿರದ ಇಡೀ ವಿಷಯ ಬಿಜೆಪಿಗೆ ಪ್ರದರ್ಶನವಾಗಿದೆ’ – ಕಪಿಲ್‌ ಸಿಬಲ್‌

ಹೊಸದಿಲ್ಲಿ: ರಾಮಮಂದಿರದ ಇಡೀ ವಿಷಯ ಬಿಜೆಪಿಗೆ ಪ್ರದರ್ಶನವಾಗಿದೆ ಎಂದು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಹೇಳಿದ್ದಾರೆ.

ಅಯೋಧ್ಯೆ ರಾಮಮಂದಿರ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ರಾಮನ ಬಗ್ಗೆ ಮಾತನಾಡುತ್ತಾರೆ. ಆದರೆ ಅವರ ನಡವಳಿಕೆ, ಅವರ ಸ್ವಭಾವವು ಭಗವಾನ್ ರಾಮನಿಗೆ ಎಲ್ಲಿಯೂ ಹತ್ತಿರವಾಗುವುದಿಲ್ಲ ಎಂದು ತಿಳಿಸಿದರು.

ಸತ್ಯ, ಸಹನೆ, ತ್ಯಾಗ, ಮತ್ತು ಇತರರಿಗೆ ಗೌರವವು ಭಗವಾನ್ ರಾಮನ ಕೆಲವು ಲಕ್ಷಣಗಳಾಗಿವೆ ಆದರೆ ಬಿಜೆಪಿಯವರು ಸಂಪೂರ್ಣವಾಗಿ ವಿರುದ್ಧವಾಗಿ ಮಾಡುತ್ತಾ ಮತ್ತು ನಾವು ರಾಮನನ್ನು ವೈಭವೀಕರಿಸುತ್ತಿದ್ದೇ ವೆ ಎಂದು ಹೇಳುತ್ತಾರೆ ಎಂದರು.

Advertisement

ಜನವರಿ 22 ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೀರಾ ಎಂದು ಪ್ರಶ್ನಿಸಿದಾಗ ನನ್ನ ಹೃದಯದಲ್ಲಿ ರಾಮನಿದ್ದು, ನಾನು ಯಾವುದೇ ತೋರಿಕೆಕಾಗಿ ಕೆಲಸ ಮಾಡುವುದಿಲ್ಲ ಎಂದು ಅಭಿಪ್ರಾಯಪಟ್ಟರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement