ಲವ್ ಸಕ್ಸಸ್ ಖುಷಿಯಲ್ಲಿದ್ದ ಅಂಕಲ್ ಗೆ ಚಾಕು ಇರಿದ ಮಹಿಳೆ ಸ್ನೇಹಿತ..!

ಬೆಂಗಳೂರು : ಲವ್ ಸಕ್ಸಸ್ ಆಯ್ತು ಎಂದು ಖುಷಿಯಲ್ಲಿದ್ದವನಿಗೆ ಮಹಿಳೆಯ ಸ್ನೇಹಿತ ಚಾಕು ಇರಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸೆಪ್ಟೆಂಬರ್ 15ರಂದು ಸುದ್ದಗುಂಟೆಪಾಳ್ಯ ಠಾಣೆ ವ್ಯಾಪ್ತಿಯ ಕೆಇಬಿ ಪಾರ್ಕ್ ಬಳಿ ಘಟನೆ ನಡೆದಿದ್ದು, ಇರಿತಕ್ಕೊಳಗಾದ ಹಿತೇಂದ್ರ ಕುಮಾರ್ (58) ನೀಡಿರುವ ದೂರಿನನ್ವಯ ಮಹಿಳೆ ಕಿಮ್ ಕಿರಣ್ ನಿಕ್ಕಂ ಹಾಗೂ ಆಕೆಯ ಸ್ನೇಹಿತ ಸಿದ್ದು ನನ್ನ ಪೊಲೀಸ್ರು ಬಂಧಿಸಿದ್ದಾರೆ.

ಜಯನಗರ 9ನೇ ಬ್ಲಾಕ್‌ನಲ್ಲಿ ಹಿತೇಂದ್ರ ಕುಮಾರ್ ನ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆಂದು ಜೂನ್ ತಿಂಗಳಿನಲ್ಲಿ ಕುಮ್ ಕಿರಣ್ ನಿಕ್ಕಂ ಎಂಬ ಮಹಿಳೆ ಸೇರಿದ್ದಳು.ಆದರೆ 2-3 ತಿಂಗಳುಗಳ ಬಳಿಕ ಕೆಲಸ ಬಿಟ್ಟಿದ್ದಳು. ಮಹಿಳೆ ಮೇಲೆ ಪ್ರೀತಿ ಹೊಂದಿದ್ದ ಹಿತೇಂದ್ರ ಕುಮಾರ್ ಸೆಪ್ಟೆಂಬರ್ 14ರಂದು ಆಕೆಯನ್ನ ಭೇಟಿಯಾಗಲು ಕರೆದಿದ್ರಂತೆ. ಅದರಂತೆ ಇಬ್ಬರೂ ಸಹ ಬಿಟಿಎಂ ಲೇಔಟ್‌ನ ಉಡುಪಿ ಗಾರ್ಡನ್ ಸಿಗ್ನಲ್ ಬಳಿಯಿರುವ ಕೆಇಬಿ ಪಾರ್ಕ್‌ನಲ್ಲಿ ಭೇಟಿಯಾಗಿದ್ದರು.

ಈ ವೇಳೆ ಮಹಿಳೆ ಬಳಿ ಹಿತೇಂದ್ರ ಕುಮಾರ್ ತನ್ನ ಪ್ರೀತಿಯನ್ನ ಹೇಳಿಕೊಂಡಿದ್ದರು. ಆಕೆಯೂ ಸಹ ಹಿತೇಂದ್ರ ಕುಮಾರ್ ಪ್ರೀತಿಗೆ ಮಹಿಳೆ ಸಮ್ಮತಿಸಿದ್ದಳು. ಅದೇ ಖುಷಿಯಲ್ಲಿದ್ದ ಹಿತೇಂದ್ರ ಕುಮಾರ್ ಮಾರನೇ ದಿನವೂ ಸಹ ಮಹಿಳೆಯನ್ನ ಅದೇ ಸ್ಥಳದಲ್ಲಿ ಭೇಟಿಗೆ ಕರೆದಿದ್ದರು. ಅದೇ ಪಾರ್ಕ್‌ನಲ್ಲಿ ಮತ್ತೆ ಕುಳಿತು ಇಬ್ಬರೂ ಮಾತುಕತೆ ಮಾಡುತ್ತಿದ್ದಾಗ ಏಕಾಏಕಿ ಮಹಿಳೆಯ ಸ್ನೇಹಿತ ಚಾಕು ಸಮೇತ ಎಂಟ್ರಿಯಾಗಿದ್ದಾನೆ.

Advertisement

ಈ ವೇಳೆ ಮೂರು ಜನರ ಮಧ್ಯೆ ಮಾತಿಗೆ ಮಾತು ಬೆಳೆದಿದ್ದು, ಹಿತೇಂದ್ರ ಕುಮಾರ್ ಅವರ ಹೊಟ್ಟೆ ಬೆನ್ನಿಗೆ ಆರೋಪಿ ಸಿದ್ದು ಚಾಕು ಇರಿದಿದ್ದಾನೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಹಿತೇಂದ್ರ ಕುಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಹಿಳೆ ಹಾಗೂ ಆಕೆಯ ಸ್ನೇಹಿತನ ಉದ್ದೇಶಪೂರ್ವಕವಾಗಿ ಕೊಲೆಗೆ ಯತ್ನಿಸಿರುವುದಾಗಿ ದೂರು ನೀಡಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸುದ್ದುಗುಂಟೆ ಠಾಣೆ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.

 

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement