ವಯನಾಡು ದುರಂತದಿಂದ ದಾಖಲೆ ಕಳೆದುಕೊಂಡವರಿಗೆ ವಿಶೇಷ ಅದಾಲತ್ ಯೋಜನೆ

ವಯನಾಡು: ನೆನೆದಷ್ಟು ಭಯಭೀತಗೊಳಿಸುವ ವಯನಾಡು ದುರಂತ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಈ ದುರಂತದಿಂದಾಗಿ ಅದೆಷ್ಟೋ ಜನ ಕುಟುಂಬ, ಮನೆ ಸರ್ವಸ್ವವನ್ನೂ ಕಳೆದುಕೊಂಡು ಬೀದಿಗೆ ಬಂದು ನಿಂತಿದ್ದಾರೆ. ತಮ್ಮ ಆಸ್ತಿಪಾಸ್ತಿ ಕಳೆದುಕೊಂಡು ದಾಖಲೆಗಳು ಕೂಡಾ ನಷ್ಟವಾಗಿದೆ. ಅಂತಹವರಿಗಾಗಿ ಇದೀಗ ಹೈಕೋರ್ಟ್ ಹೊಸ ನಿಯಮ ಜಾರಿಗೆ ತರಲಿದೆ.

ಭೂಕುಸಿತಕ್ಕೆ ಸಂಬಂಧಿಸಿದ ವಿವಿಧ ಅರ್ಜಿಗಳನ್ನು ಹೈಕೋರ್ಟ್ ಇಂದು ಪರಿಗಣಿಸಲಿದೆ. ನ್ಯಾಯಮೂರ್ತಿ ಜಯಶಂಕರನ್ ನಂಬಿಯಾರ್, ನ್ಯಾಯಮೂರ್ತಿ ವಿಎಂ ಶ್ಯಾಮ್ ಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಸಂತ್ರಸ್ತರಿಗೆ, ಅವರ ಕುಟುಂಬಗಳಿಗೆ ಪರಿಹಾರ ಸೇರಿದಂತೆ ಅನೇಕ ಬೇಡಿಕೆಗಳ ಅರ್ಜಿಯನ್ನು ನ್ಯಾಯಾಲಯ ಇಂದು ಪರಿಗಣಿಸಲಿದೆ.

ಚುರಲ್‌ಮುಲಾ ಮುಂಡಕೈ ಸಾಮ್ಲಿಮಟ್ಟಂನಲ್ಲಿನ ಭೂಕುಸಿತ ಪರಿಣಾಮವಾಗಿ ಸಾವುನೋವುಗಳ ಸಂಖ್ಯೆ ಹೇರಳವಾಗಿದ್ದು, ಸಂತ್ರಸ್ತರ ಅವಲಂಬಿತರಿಗೆ ವಿಳಂಬವಿಲ್ಲದೆ ಅವರ ಸವಲತ್ತುಗಳು ಸಿಗುವಂತೆ ಮಾಡಲು ಹಲವಾರು ವಿಧಾನಗಳನ್ನು ಸಡಿಲಗೊಳಿಸಲಾಗುವುದು. ಎಕ್ಸ್‌ಗ್ರೇಷಿಯಾ ಸೇರಿದಂತೆ ಎಲ್ಲಾ ಪ್ರಯೋಜನಗಳನ್ನು ಪಡೆಯಲು ಇದು ಸಹಕಾರಿಯಾಗಿದೆ. ಕೋವಿಡ್ ಪರಿಹಾರ ಮಾದರಿಯಲ್ಲಿಯೇ ವಿಪತ್ತು ನಿರ್ವಹಣಾ ಕಾಯಿದೆಯ ಸೆಕ್ಷನ್ 19 ರ ಅಡಿಯಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ನೀಡಲಾದ ಅಧಿಕಾರವನ್ನು ಬಳಸಿಕೊಂಡು ಸರ್ಕಾರವು ಸಂಬಂಧಿಕರನ್ನು ವಾರಸುದಾರರನ್ನಾಗಿ ಪರಿಗಣಿಸಲು ಆದೇಶ ಹೊರಡಿಸಲಾಗಿದೆ.

Advertisement

ಭೂಕುಸಿತದಲ್ಲಿ ಮೃತರ ಕುಟುಂಬ ಸದಸ್ಯರು ಇಲ್ಲದಿದ್ದರೆ, ಮುಂದಿನ ಸಂಬಂಧಿಕರು ಸಹ ಆರ್ಥಿಕ ನೆರವು ಪಡೆಯುತ್ತಾರೆ. ಇದಕ್ಕಾಗಿ ಉತ್ತರಾಧಿಕಾರ ಹಕ್ಕು ಪ್ರಮಾಣಪತ್ರವನ್ನು ಹಾಜರುಪಡಿಸಬೇಕು. ನಾಪತ್ತೆಯಾದವರ ಅವಲಂಬಿತರಿಗೂ ಆರ್ಥಿಕ ನೆರವು ಸಿಗಲಿದೆ ಎಂದು ಹೇಳಲಾಗಿದೆ. ಅಂಗವೈಕಲ್ಯದಿಂದ ಬಳಲುತ್ತಿರುವವರಿಗೆ ಸಿಎಂಡಿಆರ್‌ಎಫ್‌ನಿಂದ 50,000 ನೀಡಲು ನಿರ್ಧರಿಸಲಾಗಿದೆ. ಪರಿಹಾರ ಶಿಬಿರಗಳಲ್ಲಿ ವಾಸಿಸುವ ಕುಟುಂಬಕ್ಕೆ ತಿಂಗಳಿಗೆ 6000 ರೂ ಬಾಡಿಗೆ ನೀಡಲಾಗುವುದು ಎಂದು ಕೇರಳ ಮುಖ್ಯಮಂತ್ರಿ ತಿಳಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement