ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ರಜನೀಶ್ ಗೋಯಲ್ ನೇಮಕ

ಬೆಂಗಳೂರು : ಕರ್ನಾಟಕ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಗಳಾಗಿ ಹಿರಿಯ ಐಎಎಸ್ ಅಧಿಕಾರಿ ರಜನೀಶ್ ಗೋಯಲ್ ಅವರು ನೇಮಕಗೊಂಡಿದ್ದು, ನೂತನ ಸಿಎಸ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದಿಸಿ ಶುಭ ಹಾರೈಸಿದರು. ಜೊತೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ವಂದಿತಾ ಶರ್ಮಾ ಅವರು ಇಂದು ನಿವೃತ್ತರಾದರು. 2022ರ ಮೇ.31 ರಂದು ಪಿ.ರವಿಕುಮಾರ್ ಅವರ ನಿವೃತ್ತಿಯಿಂದ‌ ತೆರವಾಗಿದ್ದ ಸ್ಥಾನವನ್ನು ತುಂಬಿದ್ದ ವಂದಿತಾ ಶರ್ಮಾ ಅವರು ರಾಜ್ಯದ 39ನೇ ಸಿಎಸ್ ಆಗಿದ್ದರು. ಇದೀಗ 40 ನೇ ಸಿಎಸ್ ಆಗಿ ರಜನೀಶ್ ಗೋಯಲ್ ನೇಮಕಗೊಂಡಿದ್ದಾರೆ. ಮತ್ತೋರ್ವ ಮಹಿಳಾ ಐಎಎಸ್ ಅಧಿಕಾರಿಯಾದ ಶಾಲಿನಿ ರಜನೀಶ್ ಅವರು ರಜನೀಶ ಗೋಯಲ್ ಅವರ ಪತ್ನಿಯಾಗಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement