ಸಿಎಂ ಸಿದ್ದರಾಮಯ್ಯ ವಿರುದ್ಧ ಇಂದು ಈ ಸೆಕ್ಷನ್ ಅಡಿಯಲ್ಲಿ ಎಫ್‌ಐಆರ್ ಸಾಧ್ಯತೆ..!

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಮುಡಾ ಹಗರಣ ತನಿಖೆಗೆ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಅಷ್ಟೇ ಅಲ್ಲದೇ ಯಾವ ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಿಸಬೇಕೆಂದು ಕೋರ್ಟ್ ಸೂಚನೆ ನೀಡಿದೆ. ಸಿಆರ್‌ಪಿಸಿ 156 (3) ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ರಿಂದ ಮೈಸೂರು ಎಸ್‌ಪಿಗೆ ಎಫ್‌ಐಆರ್ ದಾಖಲಿಸುವಂತೆ ಆದೇಶ ನೀಡಿದೆ. ಯಾವಯಾವ ಸೆಕ್ಷನ್ ದಾಖಲಾಗುತ್ತೆ ಅಂತ‌ ನೋಡೋದಾದ್ರೆ. * IPC 120 B – ಅಪರಾಧಿಕ ಒಳಸಂಚು * 166 IPC – ಯಾವುದೇ ವ್ಯಕ್ತಿಗೆ ಹಾನಿ ಉಂಟು ಮಾಡುವ ಉದ್ದೇಶದಿಂದ ಸಾರ್ವಜನಿಕ ನೌಕರನು ಕಾನೂನುಬದ್ಧ ಆದೇಶ ಪಾಲಿಸದಿರುವುದು * 403 IPC – ಸ್ವತ್ತಿನ ಅಪ್ರಾಮಾಣಿಕ ದುರುಪಯೋಗ * 406 IPC – ಅಪರಾಧಿಕ ನಂಬಿಕೆದ್ರೋಹ * 420 IPC – ವಂಚನೆ ಮಾಡುವುದು ಮತ್ತು ಸ್ವತ್ತನ್ನು ನೀಡಲು ಅಪ್ರಾಮಾಣಿಕವಾಗಿ ಪ್ರೇರೇಪಿಸುವುದು * 426 IPC – ಕೇಡಿನ ಅಪರಾಧಕ್ಕಾಗಿ ದಂಡನೆ * 465 IPC – ಖೋಟಾ ತಯಾರಿಕೆಗೆ ದಂಡನೆ * 468 IPC – ವಂಚನೆಯ ಉದ್ದೇಶಕ್ಕಾಗಿ ಖೋಟಾ ತಯಾರಿಕೆ * 340 IPC – ಅಕ್ರಮ ಬಂಧನ * 351 IPC – ಹಲ್ಲೆ ಭಷ್ಟಾಚಾರ ನಿಯಂತ್ರಣ ಕಾಯ್ದೆ 1988 * 9 PC act – ಸಾರ್ವಜನಿಕ ಸೇವಕನ ಮೇಲೆ ಪ್ರಭಾವ ಬೀರುವ ಮೂಲಕ ಅನುಕೂಲತೆ ಸ್ವೀಕಾರದ ಅಪರಾಧದ ಬಗ್ಗೆ ತಿಳಿಸುತ್ತದೆ * 13 of PC Act – ಸಾರ್ವಜನಿಕ ಸೇವಕನಿಂದ ಕ್ರಮಿನಲ್ ದುರ್ನಡತೆಯ ಬಗ್ಗೆ ವ್ಯವಹರಿಸುತ್ತದೆ. * ಅಪ್ರಾಮಾಣಿಕವಾಗಿ ಅಥವಾ ಮೋಸದಿಂದ ಆಸ್ತಿಯನ್ನ ದುರುಪಯೋಗಪಡಿಸಿಕೊಂಡು ಅಥವಾ ಪರಿವರ್ತಿಸಿ ಇತರರಿಗೆ ವಹಿಸಿಕೊಟ್ಟ ಆಸ್ತಿಯನ್ನ ದುರುಪಯೋಗಪಡಿಸಿಕೊಳ್ಳಲು ಅಥವಾ ಪರಿವರ್ತಿಸಲು ಕಚೇರಿಯನ್ನ ಬಳಸಿಕೊಳ್ಳುವುದು ಬೇನಾಮಿ ಪ್ರಾಪರ್ಟಿ ಟ್ರಾನ್ಸಾಕ್ಷನ್ ಆ್ಯಕ್ಟ್ -1988 * sec 3 – ಬೇನಾಮಿ ವಹಿವಾಟುಗಳ ನಿಷೇಧ ಮತ್ತು ಪ್ರವೇಶಕ್ಕೆ ಶಿಕ್ಷೆ * sec 53 – ಬೇನಾಮಿ ದಂಡದ ಬಗ್ಗೆ ತಿಳಿಸುತ್ತದೆ * sec – 54 – ಸುಳ್ಳು ಮಾಹಿತಿ ನೀಡುವುದಕ್ಕೆ ದಂಡದ ಬಗ್ಗೆ ತಿಳಿಸುತ್ತದೆ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ – 2011 * sec – 3 – ಎಲ್ಲಾ ರೀತಿಯ ಭೂಕಬಳಿಕೆ ನಿಷೇಧ ಮತ್ತು ಕಾನೂನಬಾಹೀರ * sec – 4- ಯಾವುದೇ ವ್ಯಕ್ತಿ ಸ್ವತಃ ಅಥವಾ ಇನ್ನೊಬ್ಬ ವ್ಯಕ್ತಿಯ ಮೂಲಕ ಭೂ ಕಬಳಿಕೆ ಮಾಡುವಂತಿಲ್ಲ – ಕಾನೂನು ಬದ್ದ ಭೂ ಹಿಡುವಳಿದಾರರನ್ನ ಹೊರತುಪಡಿಸಿ ವಶಪಡಿಸಿಕೊಂಡ ಭೂಮಿಯನ್ನ ವಶಕ್ಕೆ ಪಡೆದುಕೊಂಡರೆ ಅದು ಅಪರಾಧ, ಈ ಸೆಕ್ಷನ್‌ಗಳ ಅಡಿಯಲ್ಲಿ ಎಫ್ ಐ ಆರ್ ದಾಖಲಿಸಿ ತನಿಖೆ ನಡೆಸೋ ಸಾಧ್ಯತೆಯಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement