ಸುಪ್ರೀಂ ಕೋರ್ಟ್ ವಕೀಲರ ಮೇಲೆ ಬೀದಿನಾಯಿ ದಾಳಿ – ಗಾಯಗೊಂಡ ಕೈಯೊಂದಿಗೆ ಕೋರ್ಟ್‌ಗೆ ಹಾಜರಾದ ವಕೀಲ, ಸುಪ್ರೀಂ ಕಳವಳ

ಮಾನವರ ಮೇಲೆ ಬೀದಿ ನಾಯಿಗಳಿಂದ ಹೆಚ್ಚುತ್ತಿರುವ ದಾಳಿಗಳ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ಕಳವಳ ವ್ಯಕ್ತಪಡಿಸಿದೆ.
ಕಾರನ್ನು ಪಾರ್ಕ್ ಮಾಡುತ್ತಿದ್ದ ವೇಳೆ ನಾಯಿಯೊಂದರ ದಾಳಿಯಿಂದ ಗಾಯಗೊಂಡಿದ್ದ ವಕೀಲರಾದ ಕುನಾಲ್ ಚಟರ್ಜಿ ಸೋಮವಾರ ಸುಪ್ರೀಂ ಕೋರ್ಟ್ ಗೆ ಹಾಜರಾಗಿದ್ದರು.

ಅವರು ಗಾಯಗೊಂಡ ಕೈಯೊಂದಿಗೆ ನ್ಯಾಯಾಲಯದ ಮುಂದೆ ಹಾಜರಾದ ಬಳಿಕ ಈ ಬಗ್ಗೆ ಚರ್ಚೆ ನಡೆಯಿತು. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ. ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ. ಎಸ್. ನರಸಿಂಹ ಮತ್ತು ಮನೋಜ್ ಮಿಶ್ರಾ ಅವರ ಪೀಠವು ಸಿಜೆಐಗೆ ತನ್ನ ಕಳವಳ ವ್ಯಕ್ತಪಡಿಸಿತು.

ಉತ್ತರಪ್ರದೇಶದಲ್ಲಿ ಬಾಲಕನೊಬ್ಬ ನಾಯಿ ಕಚ್ಚಿ ರೇಬಿಸ್ ತಗುಲಿ ತಂದೆಯ ಮಡಿಲಲ್ಲಿ ಪ್ರಾಣ ಬಿಟ್ಟಾಗ ವೈದ್ಯರು ಮತ್ತು ತಂದೆ ಸಂಪೂರ್ಣವಾಗಿ ಅಸಹಾಯಕರಾಗಿದ್ದರು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.

Advertisement

ಆಗ ವಕೀಲರೊಬ್ಬರು ಸಿಜೆಐ ಅವರನ್ನು ಸ್ವಯಂಪ್ರೇರಿತವಾಗಿ ಈ ವಿಷಯದ ಕುರಿತು ಜಾಗೃತಿ ಮೂಡಿಸುವಂತೆ ಒತ್ತಾಯಿಸಿದರು. ಮಾನವರ ಮೇಲೆ ಬೀದಿನಾಯಿ ದಾಳಿಗೆ ಸಂಬಂಧಿಸಿದ ಸಾಕಷ್ಟು ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ತನ್ನ ವಶಕ್ಕೆ ಪಡೆದುಕೊಂಡಿದೆ.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement