ಹಾಲಶ್ರೀ ಮಠದಲ್ಲಿ 56 ಲಕ್ಷ ಹಣ ಇಟ್ಟು ಹೋದ ಅನಾಮಿಕ ವ್ಯಕ್ತಿ

ವಿಜಯನಗರ : ಎಂಎಲ್ಎ ಟಿಕೆಟ್ ಹಗರಣ ಲಕ್ಷಗಟ್ಟಲೆ ಹಣವನ್ನು ಅನಾಮಿಕ ವ್ಯಕ್ತಿಯೊಬ್ಬರು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದಲ್ಲಿರುವ ಹಾಲಸ್ವಾಮಿ ಮಠಕ್ಕೆ ತಂದು ಇಟ್ಟಿದ್ದಾರೆ.

ಅನಾಮಿಕ ವ್ಯಕ್ತಿಯ ಹೆಸರು ಪ್ರಣವ್ ಪ್ರಸಾದ್​ ಎನ್ನಲಾಗುತ್ತಿದೆ. ಈತ ಖುದ್ದು ಹಾಲಸ್ವಾಮಿ ಮಠಕ್ಕೆ ತೆರಳಿ ಹಣ ನೀಡಿದ್ದಾನೆ. ಅಲ್ಲದೆ ಈ ಕುರಿತಾಗಿ ವಿಡಿಯೋ ಹೇಳಿಕೆ ನೀಡಿರುವ ಪ್ರಣವ್, ತಾನು ವಕೀಲನೆಂದು ಹೇಳಿಕೊಂಡಿದ್ದಾರೆ. 56 ಲಕ್ಷ ರೂ. ಹಣ ಅಭಿನವ ಹಾಲಶ್ರೀಗೆ ಸೇರಿದ್ದು ಎಂದಿದ್ದಾರೆ.

ಅಭಿನವ ಹಾಲಶ್ರೀ ಕಾರು ಚಾಲಕ ಮೈಸೂರಿನಲ್ಲಿ ನನಗೆ ಹಣ ನೀಡಿದ್ದರು. ಒಟ್ಟು 60 ಲಕ್ಷ ರೂ. ತಂದು ಈ ಪೈಕಿ 56 ಲಕ್ಷ ರೂ. ನನಗೆ ತಲುಪಿಸಿದ್ದರು. ಉಳಿದ 4 ಲಕ್ಷ ರೂ. ವಕೀಲರ ಶುಲ್ಕಕ್ಕಾಗಿ ಕಾರು ಚಾಲಕ ಪಡೆದುಕೊಂಡಿದ್ದಾರೆ. ಮೈಸೂರಿನ ನನ್ನ ಕಚೇರಿಗೆ ಶ್ರೀಗಳ ಕಾರು ಚಾಲಕ ಹಣ ಕೊಟ್ಟು ಹೋಗಿದ್ದರು. ಹಣ ವಾಪಸ್ ಪಡೆಯಲು ಯಾರೂ ಬಾರದಿದ್ದರಿಂದ ಮಠಕ್ಕೆ ನೀಡಿದ್ದೇನೆ. ನಾನು ಖುದ್ದು ಹಾಲಸ್ವಾಮಿ ಮಠಕ್ಕೆ ಆಗಮಿಸಿ 56 ಲಕ್ಷ ರೂ. ಕೊಟ್ಟಿದ್ದೇನೆ ಎಂದು ವಿಡಿಯೋ ಹೇಳಿಕೆಯಲ್ಲಿ ವಕೀಲ ಪ್ರಣವ್ ಪ್ರಸಾದ್​​ ಸ್ಪಷ್ಟನೆ ನೀಡಿದ್ದಾರೆ.
Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement