5 ವರ್ಷಗಳಲ್ಲಿ ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆ ವಿಶ್ವದಲ್ಲೇ ಅತ್ಯಂತ ಆಧುನಿಕವಾಗಲಿದೆ- ಶಾ

ಗುಜರಾತ್: ಮೂರು ಹೊಸ ಕ್ರಿಮಿನಲ್ ಕಾನೂನುಗಳ ಮಹತ್ವವನ್ನು ಒತ್ತಿ ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 5 ವರ್ಷಗಳ ನಂತರ ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ವಿಶ್ವದಲ್ಲೇ ಅತ್ಯಂತ ಆಧುನಿಕವಾಗಲಿದೆ ಎಂದು ಹೇಳಿದ್ದಾರೆ.

ಗುಜರಾತ್ ನ ರಾಷ್ಟ್ರೀಯ ಫೋರೆನ್ಸಿಕ್ ಸೈನಸ್ಸ್ ವಿಶ್ವವಿದ್ಯಾಲಯದ 5ನೇ ಅಂತರಾಷ್ಟ್ರೀಯ ಮತ್ತು 44 ನೇ ಅಪರಾಧಶಾಸ್ತೃ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ವ್ಯವಸ್ಥೆಯು ಹೊಸ ಯುಗವನ್ನು ಪ್ರವೇಶಿಸುತ್ತಿರುವ ಸಮಯದಲ್ಲಿ ಈ ಕಾರ್ಯಕ್ರಮದ ಉದ್ಘಾಟನೆ ನಡೆಯುತ್ತಿದೆ ಎಂದರು.

ಇನ್ನು ಈ ಹಿಂದೆ ಇದ್ದ ಐಪಿಸಿ,ಸಿಆರ್‍ ಪಿಸಿ ಮತ್ತು ಸಾಕ್ಷಿ ಕಾನೂನುಗಳನ್ನು ರದ್ದುಗೊಳಿಸಲಾಗಿದೆ.ಅದರ ಬದಲಿಗೆ ಹೊಸ ಕಾನೂನುಗಳನ್ನು ಪರಿಚಯಿಸಲಾಗಿದೆ. ಈ ಹೊಸ ಕಾನೂನಿನಲ್ಲಿ ಅಪರಾಧ ಸ್ಥಳಗಳಲ್ಲಿ ವಿಧಿ ವಿಜ್ಞಾನ ಅಧಿಕಾರಿಗಳ ಭೇಟಿಯನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ 7 ಅಥವಾ ಅದಕ್ಕಿಂತ ಹಿಂದಿನ ಅಪರಾಧದ ಬಗ್ಗೆ ಕಾನೂನಿನಲ್ಲಿ ತನಿಖೆ ನಡೆಸಲು ಸುಲಭವಾಗುತ್ತದೆ. ಇದರಿಂದ ನ್ಯಾಯಾಧೀಶರ ಕೆಲಸವು ಸುಲಭವಾಗುತ್ತದೆ ಎಂದು ಹೇಳಿದ್ದಾರೆ.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement