7.72 ಕೋಟಿ ಮೌಲ್ಯದ ದಿನಸಿ ಸಾಮಗ್ರಿ ಹಾಗೂ ಅಕ್ಕಿ ವಶ.!

 

ಶಿವಮೊಗ್ಗ: ಲೋಕಸಭಾ ಚುನಾವಣೆ ವೇಳೆ ಮತದಾರರಿಗೆ ಹಂಚಲು ಸಂಗ್ರಹಿಸಿ ಇಟ್ಟಿರುವ ಅನುಮಾನದ ಮೇಲೆ ಶಿವಮೊಗ್ಗದಲ್ಲಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ಪೊಲೀಸರು ₹7.72 ಕೋಟಿ ಮೌಲ್ಯದ ದಿನಸಿ ಸಾಮಗ್ರಿ ಹಾಗೂ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

ದಿನಸಿ ಸಾಮಗ್ರಿ ಚುನಾವಣೆ ವೇಳೆ ಹಂಚಲು ಬಳಕೆಯಾಗಲಿದೆ ಎಂಬ ಮಾಹಿತಿ ಮೇರೆಗೆ ಶಿವಮೊಗ್ಗದ ಹೊನ್ನಾಳಿ ರಸ್ತೆಯ ರಾಗಿಗುಡ್ಡದ ಫ್ಲೈಓವರ್ ಪಕ್ಕದ ರೈಸ್ಮಿಲ್ನಲ್ಲಿ ಸಂಗ್ರಹಿಸಿ ಇಟ್ಟಿದ್ದ ₹ 4.62 ಕೋಟಿ ಮೊತ್ತದ ದಿನಸಿ ಸಾಮಗ್ರಿಯನ್ನು ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಸತ್ಯನಾರಾಯಣ ನೇತೃತ್ವದಲ್ಲಿ ದಾಳಿ ನಡೆಸಿ ವಶಪಡಿಸಿಕೊಳ್ಳಲಾಗಿದೆ

Advertisement

ರೈಸ್ಮಿಲ್ನಲ್ಲಿ ತಲಾ 10, 20, 26, 30 ಕೆ.ಜಿಯ ಪ್ಯಾಕೆಟ್ಗಳಲ್ಲಿ ಅಂದಾಜು 3,500 ಚೀಲ ಅಕ್ಕಿ, 450 ಚೀಲ ಗೋಧಿ, 800 ಚೀಲ ಬೇಳೆ ಸೇರಿದಂತೆ 272 ಬಗೆಯ ವಿವಿಧ ದಿನಸಿ ಸಾಮಗ್ರಿಗಳು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ.

ವಿನೋಬನಗರದ ಎಪಿಎಂಸಿಯ ಉಗ್ರಾಣವೊಂದರಲ್ಲಿ ಅಕ್ರಮವಾಗಿ ಬೇರೆ ಬೇರೆ ತೂಕದ ಪ್ಯಾಕೆಟ್ನಲ್ಲಿ ಸಂಗ್ರಹಿಸಿ ಇಟ್ಟಿದ್ದ ₹ 2.80 ಕೋಟಿ ಮೌಲ್ಯದ 22,900 ಚೀಲ ಅಕ್ಕಿಯನ್ನು ಭಾನುವಾರ ರಾತ್ರಿ ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement